ದುಗ್ಗಲಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ದುಗ್ಗಲಡ್ಕ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ನ. 15 ರಂದು ಆಚರಿಸಲಾಯಿತು. ಕೇಂದ್ರದ ಪುಟಾಣಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೇಂದ್ರದ ಪುಟಾಣಿ ಪ್ರೀತಿ ಕಾಸ್ತಾ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೇಂದ್ರದ ಪುಟಾಣಿ ವಂಶಿ ಕೆ.ಎಸ್.ಉಪಸ್ಥಿತರಿದ್ದರು. ನ.ಪಂ. ಸದಸ್ಯರಾದ ಶಶಿಕಲಾ ಎ.ನೀರಬಿದಿರೆ ಅತಿಥಿಗಳಾಗಿ ಭಾಗವಹಿಸಿದರು. ದುಗ್ಗಲಡ್ಕ ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಸುರೇಶ್ ಕುಮಾರ್ ಹಾಗೂ ನಿಂತಿಕಲ್ಲು ಐಟಿಐ ಶಿಕ್ಷಕ ಶೇಖರ್ ಕುದ್ಪಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಬಾಲವಿಕಾಸ ಸಮಿತಿ ಅಧ್ಯಕ್ಷರಾದ ಶ್ರೀಮತಿ ಅಶ್ವಿತ, ಹಿರಿಯ ಸದಸ್ಯರಾದ ಯಶೋದ ಮೂಡೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದರು‌. ಕಾರ್ಯಕ್ರಮದಲ್ಲಿ ಸ್ತ್ರೀಶಕ್ತಿ ಗುಂಪಿನ ಸದಸ್ಯರು, ಪುಟಾಣಿಗಳು ಮಕ್ಕಳ ಪೋಷಕರು ಭಾಗವಹಿಸಿದ್ದರು. ಸ್ಪರ್ಧಾ ವಿಜೇತರಿಗೆ ಶ್ರೀಮತಿ ನಯನ ಶೇಖರ್ ಕುದ್ಪಾಜೆ ಬಹುಮಾನ ನೀಡಿ ಸಹಕರಿಸಿದರು. ಶ್ರೀ ದುಗ್ಗಲಾಯ ಮತ್ತು ಶ್ರೀನಿಧಿ ಶ್ರೀ ಶಕ್ತಿ ಗುಂಪು ಹಾಗೂ ಊರಿನ ದಾನಿಗಳ ಸಹಕಾರದಿಂದ ಕಾರ್ಯಕ್ರಮ ನಡೆಸಲಾಯಿತು. ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಚಿತ್ರಾ ಪ್ರಶಾಂತ್ ಕಾರ್ಯಕ್ರಮ ನಿರೂಪಿಸಿದರು.ಸಹಾಯಕಿ ಶ್ರೀಮತಿ ಶಾರದ ಸಹಕರಿಸಿದರು.