ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಆಶ್ರಯದಲ್ಲಿ ಸುಳ್ಯ ಸಾಂದೀಪ್ ವಿಶೇಷ ಮಕ್ಕಳೊಂದಿಗೆ ಧನುಷ್ ಆಳ್ವ ಹುಟ್ಟುಹಬ್ಬ ಆಚರಣೆ

0

ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಆಶ್ರಯದಲ್ಲಿ ಸುಳ್ಯ ಸಾಂದೀಪ್ ವಿಶೇಷ ಮಕ್ಕಳೊಂದಿಗೆ ಧನುಷ್ ಆಳ್ವ ಹುಟ್ಟುಹಬ್ಬ ಆಚರಣೆ ನ. 16ರಂದು ನಡೆಯಿತು.


ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಉಪಾಧ್ಯಕ್ಷ ಲ. ದಯಾಕರ ಆಳ್ವರ ಪುತ್ರ ವಿದೇಶದಲ್ಲಿ ಉದ್ಯೋಗಿಯಾಗಿರುವ ಧನುಷ್ ಆಳ್ವರು ತಮ್ಮ ಹುಟ್ಟು ಹಬ್ಬವನ್ನು ಲಯನ್ಸ್ ಕ್ಲಬ್ ಸದಸ್ಯರೊಂದಿಗೆ ವಿಶೇಷ ಚೇತನ ಮಕ್ಕಳೊಂದಿಗೆ ಆಚರಿಸಿಕೊಂಡರು.

ಎಂ.ಬಿ. ಫೌಂಡೇಶನ್ ಸುಳ್ಯ ಇದರ ಅಧ್ಯಕ್ಷ, ಲಯನ್ಸ್ ಕ್ಲಬ್ ಜಿಲ್ಲಾ ಮಾಜಿ ಗವರ್ನರ್ ಎಂ.ಬಿ ಸದಾಶಿವ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ವಂದಿಸಿದರು. ಲಯನ್ಸ್ ಕ್ಲಬ್ ಬೆಳ್ಳಾರೆ ಜಲದುರ್ಗ ಇದರ ಅಧ್ಯಕ್ಷ ವಿಠಲ್ ಶೆಟ್ಟಿ, ಉಪಾಧ್ಯಕ್ಷ ದಯಾಕರ ಆಳ್ವ ಕುಂಬ್ರ ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಕ್ಲಬ್‌ನ ಸದಸ್ಯರಾದ ಹೊನ್ನಪ್ಪ ಬೆಳ್ಳಾರೆ, ಸುಳ್ಯ ಸುದ್ದಿ ಪತ್ರಿಕೆ ವರದಿಗಾರ ಈಶ್ವರ ವಾರಣಾಶಿ, ದಯಾಕರ ಆಳ್ವರ ಪತ್ನಿ ಶ್ರೀಮತಿ ಶಾಲಿನಿ ಡಿ ಆಳ್ವ, ಪುತ್ರಿ ದೀಕ್ಷಾ ಡಿ ಆಳ್ವ, ಶಾಲಾ ಸಿಬ್ಬಂದಿಗಳು ಉಪಸ್ಥಿತರಿದ್ದರು. ಹುಟ್ಟುಹಬ್ಬದ ಪ್ರಯುಕ್ತ ಮಕ್ಕಳಿಗೆ ಊಟ ಹಾಗೂ ಸಿಹಿತಿಂಡಿ ಸಿಹಿತಿಂಡಿ ನೀಡಲಾಯಿತು. ಶಾಲಾ ಶಿಕ್ಷಕಿಯರಾದ ವನಿತಾ ಕೆ, ಸೌಮ್ಯ ಕೆ.ಬಿ, ಫಾತಿಮಾ ರಮ್ಲಾ‌ ಯು.ಕೆ, ಸುಜಾತ ಹೆಚ್, ಯೋಗ ಶಿಕ್ಷಕಿ ಮೀನಾಕ್ಷಿ, ಕ್ರಾಪ್ಟ್ ಟೀಚರ್ ತೇಜಾವತಿ, ಕ್ಯಾರ್ ಟೇಕರ್ ಸತ್ಯವತಿ, ಕ್ರಾಪ್ಟ್ ಇನ್‌ಸ್ಟ್ರಕ್ಟರ್ ಅಭಿಜಿತ್, ವ್ಯಾನ್ ಚಾಲಕ ವಿನುತ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.