ಬಡ್ಡಡ್ಕ 37 ನೇ ವರ್ಷದ ಅಯ್ಯಪ್ಪ ದೀಪೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಆಲೆಟ್ಟಿ ಪಂಚಾಯತ್ ವ್ಯಾಪ್ತಿಯ ಬಡ್ಡಡ್ಕ ಶ್ರೀ ಅಯ್ಯಪ್ಪ ಭಜನಾ ಮಂದಿರದಲ್ಲಿ ವರ್ಷಂಪ್ರತಿ ಜರುಗುವ 37 ನೇ ವರ್ಷದ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರ ಬಿಡುಗಡೆಯು ಇಂದು ಬೆಳಗ್ಗೆ ಭಜನಾ ಮಂದಿರದ ವಠಾರದಲ್ಲಿ ನಡೆಯಿತು.
ಗುರುಸ್ವಾಮಿ ಜನಾರ್ದನ ಕಲ್ಲಪಳ್ಳಿ ಯವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ದಿನೇಶ್ ಬಡ್ಡಡ್ಕ, ಕಾರ್ಯದರ್ಶಿ ದಯಾನಂದ ಪತ್ತುಕುಂಜ, ಕೋಶಾಧಿಕಾರಿ ನಂದಕುಮಾರ್ ಪಿ.ಬಿ, ಗುರುಸ್ವಾಮಿ ಗಿರಿಯಪ್ಪ ನಾಯ್ಕ್ ಎಲಿಕ್ಕಳ, ಕೆ.ಕೆ ದಿನೇಶ್ ನಾಯರ್ ಕಲ್ಲಪಳ್ಳಿ, ಗಂಗಾಧರ (ದೋಸ್ತ್) ಬಡ್ಡಡ್ಕ, ವೆಂಕಟ್ರಮಣ ದೋಣಿಮೂಲೆ, ಸತೀಶ್ ಗೂಡಿಂಜ, ಶಂಕರ ಪಾಟಾಳಿ ಬಡ್ಡಡ್ಕ, ಪುಂಡರೀಕ ಕಾಪುಮಲೆ, ಸುನಿಲ್ ಗುಂಡ್ಯ, ಕಿರಣ್ ಬಡ್ಡಡ್ಕ,ಅಯ್ಯಪ್ಪ ವೃತಧಾರಿಗಳಾದ ಚಂದ್ರಶೇಖರ, ಪವನ್, ಸಂತೋಷ್, ಸಾತ್ವಿಕ್, ವರುಣ್ ಗೂಡಿಂಜ ಹಾಗೂ ಗೌತಮ್ ಪತ್ತುಕುಂಜ ಮತ್ತಿತರರು ಉಪಸ್ಥಿತರಿದ್ದರು.