ವಿಕಲಚೇತನರ ಉಚಿತ ಸವಲತ್ತುಗಳಿಗಾಗಿ ಅರ್ಜಿ ಸ್ವೀಕಾರ

0

ವಿಕಲ ಚೇತನರಿಗೆ ಬೇಕಾದ ಅವಶ್ಯ ವೀಲ್‌ಚೇರ್, ಶ್ರವಣ ಸಾಧನ ಸೇರಿದಂತೆ ಹಲವಾರು ಸವಲತ್ತುಗಳನ್ನು ಉಚಿತವಾಗಿ ವಿತರಿಸಲು ಭಾರತ ಸರ್ಕಾರದ ಅಲೀಮ್ಕೋ ಸಂಸ್ಥೆ ಯಿಂದ ಇಂದು ತಾಲೂಕಿನ ವಿಕಲ ಚೇತನರಿಂದ, ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಅರ್ಜಿ ಸ್ವೀಕರಿಸಲಾಯಿತು.

ಕಾರ್ಯಕ್ರಮದಲ್ಲಿ, ಡಿಡಿರ್‌ಸಿ ಯ ನಾಗರಾಳ ಅಲೀಮ್ಕೋ ಸಂಸ್ಥೆಯ ಜಿಗಿಷಾ, ಸಮೀಕ್ಷಾ ತಾಲೂಕು ಪಂಚಾಯತ್ ಮ್ಯಾನೇಜರ್ ಹರೀಶ್, ನೋಡೆಲ್ ಅಧಿಕಾರಿ ಬಸವರಾಜ್, ತಾಲೂಕು ಪಂಚಾಯತ್ ಎಂರ್‌ಡಬ್ಲ್ಯೂ ಚಂದ್ರಶೇಖರ, ನಗರ ಪಂಚಾಯತ್ ಯುರ್‌ಡಬ್ಲ್ಯೂ ಪ್ರವೀಣ್ ನಾಯಕ್, ಮತ್ತು ಎಲ್ಲ ಪಂಚಾಯತ್ ಗಳ ವಿರ್‌ಡಬ್ಲ್ಯೂ ರವರು ಮತ್ತು ಫಲಾನುಭವಿಗಳು ಇದ್ದರು.