ಉಬರಡ್ಕ: ನಿವೃತ್ತಿಗೊಂಡು ಊರಿಗೆ ಮರಳಿದ ಯೋಧರಿಗೆ ಸ್ವಾಗತ ಮತ್ತು ಗೌರವಾರ್ಪಣೆ ಸಮಾರಂಭ

0

ಜ್ಞಾನಧಾಮ ಚಾರಿಟೇಬಲ್ ಟ್ರಸ್ಟ್ ಉಬರಡ್ಕ ಮದುವೆಗದ್ದೆ, ಶಾಲಾಭಿವೃದ್ದಿ ಸಮಿತಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮೈಮಡಿಯಾರು ಹಾಗೂ ಯೋಧರ ಅಭಿಮಾನಿಗಳ ಸಹಯೋಗದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿ ಊರಿಗೆ ಮರಳಿದ ಜಯಕರ ಮಡ್ತಿಲರಿಗೆ ಮತ್ತು ಇತ್ತೀಚೆಗೆ ನಿವೃತ್ತಿಯಾಗಿದ್ದ ಹೇಮನಾಥ್ ಕೊಡಿಯಾಲಬೈಲ್ ಇವರಿಗೆ ಸ್ವಾಗತ ಮತ್ತು ಗೌರವಾರ್ಪಣಾ ಸಮಾರಂಭವು ಜ.2 ರಂದು ಅಮೈಮಡಿಯಾರು ಶಾಲೆಯಲ್ಲಿ ನಡೆಯಿತು.

ಯೋಧರನ್ನು ಮಧ್ಯಾಹ್ನ ಸುಳ್ಯ ಬಸ್ ನಿಲ್ದಾಣದಿಂದ ಅಮೈಮಡಿಯಾರು ಶಾಲೆಯವರೆಗೆ ತೆರೆದ ವಾಹನದ ಮೂಲಕ ಕರೆತರಲಾಯಿತು.


ಸಮಾರಂಭದ ಅಧ್ಯಕ್ಷತೆಯನ್ನು ಜ್ಞಾನಧಾಮ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ದಾಮೋದರ ಗೌಡ ಮದುವೆಗದ್ದೆ ವಹಿಸಿದ್ದರು.
ವೇದಿಕೆಯಲ್ಲಿ ಉಬರಡ್ಕ ಮಿತ್ತೂರು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಪೂರ್ಣಿಮಾ ಸೂಂತೋಡು, ಮಿತ್ತೂರು ಜೋಡುದೈವಗಳ ದೈವಸ್ಥಾನದ ಆಡಳಿತ ಮೊಕ್ತೇಸರರಾದ ವೆಂಕಟ್ರಮಣ ಕೆದಂಬಾಡಿ, ನಿವೃತ್ತ ಯೋಧ ದಿವಾಕರ ಶೆಟ್ಟಿಹಿತ್ಲು, ಶಾಲಾ ಎಸ್.ಡಿ.ಎಂ.ಸಿ‌ ಅಧ್ಯಕ್ಷ ಲೊಕೇಶ್ ಕೋಟ್ಯಾನ್, ರಾಮಚಂದ್ರ ಕಲ್ಲುಗದ್ದೆ ಗೂನಡ್ಕ, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರಾಮಕ್ಕ ಯು.,ಉಪಸ್ಥಿತರಿದ್ದರು.
ಟ್ರಸ್ಟ್ ನ ಕಾರ್ಯದರ್ಶಿ ನಿತ್ಯಾನಂದ ನಡುಮುಟ್ಲು ಸ್ವಾಗತಿಸಿ, ಹರಿಪ್ರಸಾದ್ ಪಾನತ್ತಿಲ ವಂದಿಸಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು.