ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿಗೆ ನೂತನ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಮುಂಡುಗಾರು ಸುಬ್ರಹ್ಮಣ್ಯ, ಕಾರ್ಯದರ್ಶಿಯಾಗಿ ವೆಂಕಟ್ರಮಣಯ್ಯ, ಈಶ್ವರ ವಾರಣಾಶಿ ಕೋಶಾಧಿಕಾರಿ

ಕಳಂಜ ಗ್ರಾಮದ ಕೋಟೆಮುಂಡುಗಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ಭಜನಾ ಮಂಡಳಿಯ ನೂತನ ಪದಾಧಿಕಾರಿಗಳ ಆಯ್ಕೆ ಫೆ. 4ರಂದು ಕೋಟೆ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ನಡೆದಿದೆ.
ಮಂಡಳಿಯ ಅಧ್ಯಕ್ಷ ಮುಂಡುಗಾರು ಸುಬ್ರಹ್ಮಣ್ಯರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ದೇವಸ್ಥಾನದ ಧರ್ಮದರ್ಶಿ ಸೀತಾರಾಮ ಕೋಟೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಂಡಳಿಯ ಅಧ್ಯಕ್ಷರಾಗಿ ಸುಬ್ರಹ್ಮಣ್ಯ ಮುಂಡುಗಾರು ಮುಂದುವರೆದರೆ, ನೂತನ ಕಾರ್ಯದರ್ಶಿಯಾಗಿ ಕೆ.ಎಸ್. ವೆಂಕಟ್ರಮಣಯ್ಯ, ಕೋಶಾಧಿಕಾರಿಯಾಗಿ ಈಶ್ವರ ವಾರಣಾಶಿ, ಉಪಾಧ್ಯಕ್ಷರಾಗಿ ಜಯಪ್ರಕಾಶ್ ಬಾಳೆಗುಡ್ಡೆ, ಜೊತೆ ಕಾರ್ಯದರ್ಶಿಯಾಗಿ ಕೆದಿಲ ವೆಂಕಟ್ರಮಣ ಭಟ್, ಸದಸ್ಯರಾಗಿ ಸೀತಾರಾಮ ಕೋಟೆ, ವಾರಣಾಶಿ ಸುಬ್ಬಪ್ಪಯ್ಯ, ಎಸ್. ಸೂರ್ಯನಾರಾಯಣ ವಾರಣಾಶಿ, ಎಸ್. ಶಂಕರನಾರಾಯಣ ವಾರಣಾಶಿ ಮತ್ತು ಪರನೀರು ಕೃಷ್ಣ ಭಟ್ಟರನ್ನು ಆಯ್ಕೆ ಮಾಡಲಾಯಿತು. ಸಭೆಯ ಬಳಿಕ ತಿಂಗಳ ಭಜನಾ ಕಾರ್ಯಕ್ರಮ ನಡೆಯಿತು.