ಡಾ| ಶಿರೀಶ್ ರೈಯವರಿಗೆ ಬಂಟರ ಸಂಘದಿಂದ ಗೌರವ

0

ತಮಿಳುನಾಡು ರಾಜ್ಯದ ಎಂ.ಜಿ.ಆರ್. ಮೆಡಿಕಲ್ ಯುನಿವರ್ಸಿಟಿಯವರು ನಡೆಸಿದ ಡಿ.ಎಂ. ಗ್ಯಾಸ್ಟ್ರೋ ಎಂಟರೋಲಾಜಿ ಮೆಡಿಸಿನ್ ಪರೀಕ್ಷೆಯಲ್ಲಿ ತಮಿಳುನಾಡಿನ ತೂತುಕುಡಿ ಜಿಲ್ಲಾ ಸರಕಾರಿ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿ, ಸುಳ್ಯ ನಾವೂರು ದಯಾಕರ ರೈ- ಜಯಲಕ್ಷ್ಮೀ ದಂಪತಿಯ ಪುತ್ರ ಡಾ| ಶಿರೀಶ್ ರೈಯವರು ಉತ್ತೀರ್ಣರಾಗಿದ್ದು, ಅವರನ್ನು ಸುಳ್ಯ ಬಂಟರ ಸಂಘದ ವತಿಯಿಂದ ಸನ್ಮಾನಿಸಲಾಯಿತು.


ಫೆ.೧೦ರಂದು ಬಂಟರ ಸಂಘದ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಈ ಸರಳ ಸಮಾರಂಭದಲ್ಲಿ, ಹಿರಿಯರಾದ ಐತಪ್ಪ ರೈ ಅಜ್ರಂಗಳರವರು ಡಾ| ಶಿರೀಶ್ ರೈಯವರನ್ನು ಸನ್ಮಾನಿಸಿದರು.


ಬಂಟರ ಸಂಘದ ಪ್ರಧಾನ ಕಾರ್ಯದರ್ಶಿ ಸುಭಾಶ್‌ಚಂದ್ರ ರೈ ತೋಟ, ಕೋಶಾಧಿಕಾರಿ ಗಂಗಾಧರ ರೈ ಸೋಣಂಗೇರಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಶ್ರೀಮತಿ ಕಮಲಾಕ್ಷಿ ಟೀಚರ್, ಅಧ್ಯಕ್ಷೆ ಶ್ರೀಮತಿ ಇಂದಿರಾ ರಾಜಶೇಖರ ರೈ, ಡಾ| ಶಿರೀಶ್‌ರವರ ತಂದೆ ದಯಾಕರ ರೈ, ಜಾಲ್ಸೂರು ವಲಯಾಧ್ಯಕ್ಷ ಶಿವರಾಮ ರೈ, ಬೆಳ್ಳಾರೆ ವಲಯಾಧ್ಯಕ್ಷ ಕರುಣಾಕರ ಆಳ್ವ, ಬಾಳಿಲ ವಲಯಾಧ್ಯಕ್ಷ ಕರುಣಾಕರ ರೈ ನಾಲ್ಗುತ್ತು ಹಾಗೂ ಪದಾಧಿಕಾರಿಗಳು ಇದ್ದರು.