ಅಮರ ಪಡ್ನೂರು ಮತ್ತು ಅಮರ ಮುಡ್ನೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಭೆ

0

ಅಮರ ಪಡ್ನೂರು ಮತ್ತು ಅಮರ ಮುಡ್ನೂರು ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಕಾಂಗ್ರೆಸ್ ಮುಖಂಡ ಜಯಪ್ರಕಾಶ್ ರೈಯವರ ಮನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ. ಜಯರಾಮ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಯಲ್ಲಿ ಲೋಕಸಭೆ ಚುನಾವಣೆಯ ಬಗ್ಗೆ ಚರ್ಚಿಸಿ, ಗ್ರಾಮ ಸಮಿತಿ ಮತ್ತು ಬೂತ್ ಸಮಿತಿಗಳನ್ನು ಹಾಗೂ ಚುನಾವಣಾ ಉಸ್ತುವಾರಿ ಸಮಿತಿ ರಚಿಸಲಾಯಿತು.

ಸಭೆಯಲ್ಲಿ ಪಕ್ಷದ ಪ್ರಮುಖರಾದ ಯಂ.ವೆಂಕಪ್ಪ ಗೌಡ, ಧನಂಜಯ ಅಡ್ಪಂಗಾಯ, ಜಯಪ್ರಕಾಶ್ ರೈ, ಶ್ರೀಮತಿ ರಾಜೀವಿ ರೈ, ರಾಧಾಕೃಷ್ಣ ಬೊಳ್ಳೂರು, ಬೆಟ್ಟ ರಾಜಾರಾಂ, ಗೋಕುಲದಾಸ್, ವೆಂಕಟ್ರಮಣ ಇಟ್ಟಿಗುಂಡಿ, ನಂದರಾಜ್ ಸಂಕೇಶ್, ಗಫೂರ್ ಕಲ್ಮಡ್ಕ, ಪ್ರವೀಣ ಮರು ವಂಜ, ಚಂದ್ರಲಿಂಗಮ್, ಶಶಿಧರ್ ಎಂ.ಜೆ., ಭವಾನಿಶಂಕರ್ ಕಲ್ಮಡ್ಕ, ಚೇತನ್ಕ ಕಜೆಗದ್ದೆ, ಅಲ್ಲದೆ ಪಕ್ಷದ ಪ್ರಮುಖ ನಾಯಕರು ಭಾಗವಹಿಸಿದರು. ಎರಡು ಗ್ರಾಮಗಳ ಚುನಾವಣಾ ಉಸ್ತುವಾರಿಯಾಗಿ ವೆಂಕಟ್ರಮಣ ಇಟ್ಟಿಗುಂಡಿ ಯವರನ್ನು ಆಯ್ಕೆ ಮಾಡಲಾಯಿತು. ಅಮರ ಮುಡ್ನೂರು ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಹೂವಪ್ಪ ಗೌಡ ಇವರನ್ನು ಮುಂದುವರಿಸಲಾಯಿತು. ಅಮರ ಪಡ್ನೂರು ಗ್ರಾಮದ ಗ್ರಾಮ ಸಮಿತಿ ಅಧ್ಯಕ್ಷರಾಗಿ ರಾಮಯ್ಯ ರೈ ಇವರನ್ನು ಮುಂದುವರಿಸಲಾಯಿತು. ಬೂತ್ ಸಮಿತಿ ಅಧ್ಯಕ್ಷರುಗಳಾಗಿ ರವಿಕುಮಾರ್, ರಾಮಯ್ಯ ರೈ, ಬಾಲಸುಬ್ರಹ್ಮಣ್ಯ, ಅಣ್ಣಾಜಿ ಗೌಡ , ಹೂವಪ್ಪ ಗೌಡ, ಇವರನ್ನು ಮುಂದುವರಿಸಲಾಯಿತು. ಅಲ್ಲದೆ ಐದು ಬೂತ್ ಸಮಿತಿಗಳಿಗೂ ಸದಸ್ಯರನ್ನು ನೇಮಕ ಮಾಡಲಾಯಿತು. ನೂರಕ್ಕೂ ಹೆಚ್ಚು ಕಾರ್ಯಕರ್ತರು ಸೇರಿದ್ದರು.