ಹಾಲೆಮಜಲು: ಹೆದ್ದಾರಿ ಬದಿ ತಡೆ ಬೇಲಿ ನಿರ್ಮಿಸಿ ಅಪಘಾತ ತಪ್ಪಿಸಿ

0


ಜಾಲ್ಸೂರು – ಸುಬ್ರಮಣ್ಯ ಹೆದ್ದಾರಿಯ ಹಾಲೆಮಜಲು ಬಸ್ಸು ತಂಗುದಾಣದಿಂದ ಸುಮಾರು ೧೦೦ ಮೀಟರ್‌ನಷ್ಟು ದೂರ ಹೆದ್ದಾರಿಯ ಬದಿಯಲ್ಲಿ ತಡೆ ಬೇಲಿ ಇಲ್ಲದೆ ಇತ್ತೀಚೆಗೆ ಒಂದೇ ತಿಂಗಳಿನಲ್ಲಿ ಓಮಿನಿ ಕಾರು ಸೇರಿದಂತೆ ಅನೇಕ ದ್ವಿಚಕ್ರ ವಾಹನಗಳು ತಿರುವಿನಲ್ಲಿ ಚಾಲಕರ ನಿಯಂತ್ರಣ ಕಳೆದುಕೊಂಡು ಕಂದಕಕ್ಕೆ ಬಿದ್ದುಅಪಘಾತವಾಗುತ್ತಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ರಸ್ತೆಯ ಬದಿಯಲ್ಲಿ ತಡೆ ಬೇಲಿನಿರ್ಮಿಸುವಂತೆ ಕ್ರಮ ಕೈಗೊಳ್ಳಬೇಕಾಗಿದೆ. ಚಿತ್ರವರದಿ. ಡಿ ಎಚ್.