ಶ್ರೀ ಮಹಾವಿಷ್ಣು ಮಿತ್ರ ಬಳಗದ ವತಿಯಿಂದ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನಕ್ಕೆ ಚೆಯರ್ ಮತ್ತು ಟೇಬಲ್ ಹಸ್ತಾಂತರ

0

ಕೊಡಗು ಸಂಪಾಜೆ ಗ್ರಾಮದ ಅರಮನೆತೋಟ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮೇ‌.10ರಂದು ಕೂಡಿ ಮೇ.11ರಂದು ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ ಹಾಗೂ ಪ್ರಸಾದ ವಿತರಣೆಯೊಂದಿಗೆ ಸಂಪನ್ನಗೊಂಡಿತು.

ಈ ಸಂದರ್ಭದಲ್ಲಿ 10. ರಂದು ಬೆಳಿಗ್ಗೆ ದೀಪಾರಾಧನೆ ಸಮಯದಲ್ಲಿ ಶ್ರೀ ಮಹಾವಿಷ್ಣು ಮಿತ್ರ ಬಳಗದ ಸರ್ವ ಸದಸ್ಯರಿಂದ ಶ್ರೀ ದೇವರ ಸಾನಿಧ್ಯಕ್ಕೆ ಉಡುಗೊರೆಯಾಗಿ ಕೆಲವು ಸಾಮಾಗ್ರಿಗಳನ್ನು ನೀಡಿದರು.ಇತ್ತೀಚೆಗೆ ಸಂಪಾಜೆ ಶಾಲೆಯಲ್ಲಿ ಮಿತ್ರ ಬಳಗದ ವತಿಯಿಂದ ನಡೆದ ಲೀಗ್ ಮಾದರಿಯ ಕ್ರಿಕೆಟ್ ಪಂದ್ಯಾಟದಲ್ಲಿ ಉಳಿಕೆ ಹಣದಿಂದ ಶ್ರೀ ದೇವರ ಸಾನಿಧ್ಯಕ್ಕೆ 30 ಚೇರ್ ಹಾಗೂ 3 ಟೇಬಲ್ ಅನ್ನು ಉಡುಗೊರೆಯಾಗಿ ನೀಡಿದರು.ಈ ಸಂದರ್ಭದಲ್ಲಿ ದೈವಸ್ಥಾನದ ಪೂಜಾರಿಗಳಾದ ಪಕ್ಕಿರ ಅಂಬಟೆಕಜೆ, ನಾರಾಯಣ ಅರಮನೆತೋಟ, ಅಧ್ಯಕ್ಷರಾದ ಕೊರಗಪ್ಪ ಅರಮನೆತೋಟ, ಕಾರ್ಯದರ್ಶಿ ಕೃಷ್ಣ ಹೆಚ್.ಐ, ಸಹಕಾರ್ಯದರ್ಶಿ ಚಂದ್ರಶೇಖರ,ಖಜಾಂಜಿ ಮುರಳಿ, ಶ್ರೀ ಮಹಾವಿಷ್ಣು ಮಿತ್ರ ಬಳಗದ ಅಧ್ಯಕ್ಷರಾದ ಜಯಕುಮಾರ್, ಸಂಚಾಲಕರಾದ ವಿಕ್ರಾಂತ್, ಮತ್ತು ಮಿತ್ರ ಬಳಗದ ಸರ್ವ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು