ಬಳ್ಪ: ಕುಮನಪಾಳ್ಯ ಉಳ್ಳಾಕುಲು ದೈವದ ಮಾಡ ನಿರ್ಮಾಣ ಕಾರ್ಯಕ್ಕೆ ಮನವಿ ಪತ್ರ ಬಿಡುಗಡೆ

0

ಬಳ್ಪ ಗ್ರಾಮ ದೈವಸ್ಥಾನ ಕುಮನಪಾಳ್ಯ ಶ್ರೀ ಶಿರಾಡಿ ರಾಜನ್ ದೈವ, ಉಳ್ಳಾಕುಲು ಮತ್ತು ಪರಿವಾರ ದೈವಗಳ ದೈವಸ್ಥಾನದಲ್ಲಿ ಉಳ್ಳಾಕುಲು ದೈವದ ಮಾಡ ನಿರ್ಮಾಣ ಕೆಲಸ ಪ್ರಾರಂಭಗೊಂಡಿದ್ದು, ಈ ಬಗ್ಗೆ ಮನವಿ ಪತ್ರ ಬಿಡುಗಡೆ ಕಾರ್ಯಕ್ರಮ ಮೇ. 14ರಂದು ನಡೆಯಿತು.

ಕ್ಷೇತ್ರದ ದೈವಪರಿಚಾರಕರಾದ ಧರ್ಮಪಾಲ ಸಂಪ್ಯಾಡಿ, ಪುಟ್ಟಣ್ಣ ನಾಳ ಮನವಿ ಪತ್ರ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಆಡಳಿತ ಸಮಿತಿ ಅಧ್ಯಕ್ಷ ರಾದ ಪದ್ಮನಾಭ ರೈ ಅಗೋಳಿಬೈಲು ಗುತ್ತು, ರಾಮಚಂದ್ರ ಎಂರ್ಬಿಲ, ತಮ್ಮಯ್ಯ ಗೌಡ ವಿಷ್ಣುಮಂಗಿಲ, ಹೊನ್ನಪ್ಪ ಎಣ್ಣೆಮಜಲು, ರೋಹಿತಾಶ್ವ ಕೊಠಾರಿ, ಹೊನ್ನಪ್ಪ ಎಂರ್ಬಿಲ, ಶಿವಪ್ರಸಾದ್ ಕೊಠಾರಿ, ನಾರಾಯಣ ಪೂಜಾರಿ ಕೊರಪ್ಪಣೆ, ಮಹೇಶ್ ಸೂಂತಾರು, ಶ್ರೀಮತಿ ತಾರ ಕುಶಾಲಪ್ಪ ಉಕ್ಕಿನಮನೆ ಉಪಸ್ಥಿತರಿದ್ದರು.