ಮೇ 16 : ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ…

0

ಪ್ರತಿ ವರ್ಷ ಮೇ ೧೬ರಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ವತಿಯಿಂದ ರಾಷ್ಟ್ರೀಯ ಡೆಂಗ್ಯೂ ಜಾಗ್ರತಿ ದಿನ ಎಂದು ಆಚರಿಸಲಾಗುತ್ತದೆ ಮತ್ತು ಡೆಂಗ್ಯೂ ರೋಗದ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ . ೨೦೨೩ರ ಆಚರಣೆಯ ಘೋಷ ವಾಕ್ಯ ಎಲ್ಲರ ಸಹಭಾಗಿತ್ವ ದಿಂದ ಡೆಂಗ್ಯೂ ಸೋಲಿಸೋಣ ಎಂಬುದಾಗಿದೆ.

ಏನಿದು ಡೆಂಗ್ಯೂ ಜ್ವರ?

ಡೆಂಗ್ಯೂ ಜ್ವರ ಮತ್ತು ಡೆಂಗ್ಯೂ ರಕ್ತಸ್ರಾವ ಜ್ವರಗಳು ಉಷ್ಣವಲಯದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಅಪಾಯಕಾರಿಯಾದ,ತೀವ್ರಜ್ವರಲಕ್ಷಣದಒಂದುರೋಗವಾಗಿದೆ.ಡೆಂಗೇ ಎಂಬ ವೈರಸ್ ಸೋಂಕುವಿನಿಂದಉಂಟಾಗುವ ಈ ಜ್ವರವು‘ಏಡಿಸ್’ ಎಂಬ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಡೆಂಗೇಜ್ವರವು ಸಾಂಕ್ರಾಮಿಕರೋಗವಾಗಿರುತ್ತದೆ. ಈ ರೋಗಕ್ಕ‘ಲಸಿಕೆ’ ¯ಭ್ಯವಿಲ್ಲದಕಾರಣ, ರೋಗವನ್ನುತಡೆಗಟ್ಟುವಲ್ಲಿ ಹೆಚ್ಚಿನ ಗಮನ ನೀಡಬೇಕಾಗುತ್ತದೆ.ಸಾಮಾನ್ಯವಾಗಿರೋಗವನ್ನು ಹರಡುವ‘ಏಡಿಸ್’ ಸೊಳ್ಳೆಯ ಸಂಖ್ಯೆಯನ್ನು ಕಡಿಮೆಗೊಳಿಸುವ ಮತ್ತು ಸೊಳ್ಳೆ ಕಡಿಯದಂತೆಎಚ್ಚರ ವಹಿಸಬೇಕಾಗುತ್ತದೆ.ಡೆಂಗೆ ಜ್ವರ ಗ್ರಾಮೀಣ ಪ್ರದೇಶದ ಜ್ವರವಾಗಿದ್ದು ನಗರ ಪ್ರದೇಶಗಳಲ್ಲೂ ಕಾಣಿಸಿಕೊಳ್ಳುತ್ತದೆ.

ರೋಗದ ಲಕ್ಷಣಗಳು :

ಸಾಮಾನ್ಯವಾಗಿ ಸುಮಾರು 80% ರೋಗಗಳಲ್ಲಿ ಸಣ್ಣಜ್ವರ ಕಾಣಿಸಿ ಕೊಳ್ಳಬಹುದು. ಕೇವಲ 5ರಿಂದ 10ಶೇಕಡಾ ರೋಗಿಗಳಲ್ಲಿ ವಿಪರೀತ ಹಠಾತ್‍ಜ್ವರ, ಸ್ನಾಯು ನೋವು, ವಾಂತಿಬೇಧಿ, ಚರ್ಮತುರಿತ, ಹೊಟ್ಟೆನೋವು,ಗಂಟು ನೋವು ಮತ್ತು ವಸಡು, ಮೂಗುಗಳಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳಬಹುದು. ವಿಪರೀತ ಸ್ನಾಯು ನೋವು ಮತ್ತುಗಂಟು ನೋವಿರುವಕಾರಣಡೆಂಗೇಜ್ವರವನ್ನು ಬ್ರೇಕ್‍ಬೋನ್‍ಜ್ವರ
(Breakbone Fever)ಎಂದೂ ಕರೆಯಲಾಗುತ್ತದೆ.ಡೆಂಗೆ ಜ್ವರದ ಕಿಟಕಿ ಅವಧಿ(window period)ಅಂದರೆ ಸೊಳ್ಳೆ ಕಡಿತಕ್ಕೆ ಮತ್ತುರೋಗದ ಲಕ್ಷಣ ಕಾಣಿಸಿಕೊಳ್ಳುವ ನಡುವಿನ ಅವಧಿ, ಸುಮಾರು 4ರಿಂದ 7ದಿನಗಳು ಆಗಿರುತ್ತವೆ.
ಡೆಂಗೇಜ್ವರದಅವಧಿಯನ್ನು ಮೂರು ಹಂತಗಳಲ್ಲಿ ವಿವರಿಸಲಾಗಿದೆ.

  1. Febrile ಅಥವಾ ಜ್ವರದ ಅವಧಿ
  2. Critical ಅಥವಾ ತೀವ್ರತೆಯ ಅವಧಿ
  3. Recovery ಅಥವಾ ಚೇತರಿಕೆಯ ಅವಧಿ ಜ್ವರದ ಅವಧಿ ಅಥವಾ(Febrile Phase)

ಈ ಅವಧಿ ಸಾಮಾನ್ಯವಾಗಿ 2ರಿಂದ 7ದಿನಗಳ ವರೆಗೆಇರಬಹುದು.ಈ ಅವಧಿಯಲ್ಲಿ ವಿಪರೀತ ಜ್ವರ ಅಂದರೆ 40 ಡಿಗ್ರಿ ಸೆಲ್ಸಿಯಸ್ (104oF) ಬರಬಹುದು.ಜೊತೆಗೆ ವಿಪರೀತ ಸ್ನಾಯು ನೋವು,ಕಣ್ಣಿನ ಸುತ್ತ ನೋವು, ತಲೆನೋವು, ಹೊಟ್ಟೆನೋವುಮತ್ತುಗಂಟುನೋವು ಬರಬಹುದು. ವಾಂತಿ ಮತ್ತು ವಾಂತಿ ಬಂದಂತೆ ಬಾಸವಾಗಿರಬಹುದು.ಚರ್ಮದಲ್ಲಿ ವಿಪರೀತತುರಿಕೆಇದ್ದು, ಅಲ್ಲಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು. ಚರ್ಮದಲ್ಲಿಅಲ್ಲಲ್ಲಿ ಕೆಂಪು ಚುಕ್ಕೆಗಳು ಕಾನಿಸಿಕೊಳ್ಳಬಹುದು.ಬಾಯಿಯ ವಸಡುಗಳಲ್ಲಿ ಮತ್ತು ಮೂಗುಗಳಲ್ಲಿರಕ್ತಸ್ರಾವ ಆಗಬಹುದು.ರಕ್ತದಲ್ಲಿನ ಪ್ಲೇಟಲೆಟ್‍ಗಳ ಸಂಖ್ಯೆ ಬಹಳ ಕಡಿಮೆಯಾದಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಆಗುವ ಸಾಧ್ಯತೆಯೂಇರುತ್ತದೆ.

ತೀವ್ರತೆಯಅವಧಿಅಥವಾ(Critical Phase)

ಈ ಅವಧಿಯಲ್ಲಿ ರಕ್ತನಾಳಗಳಿಂದ ಪ್ಲಾಸ್ಮಾದ್ರವದಸೋರಿಕೆಯಾಗಿಎದೆಗೂಡು ಮತ್ತು ಅನ್ನನಾಳದ ಹೊಟ್ಟೆಯ ಭಾಗದಲ್ಲಿ ನೀರು ತುಂಬಿಕೊಳ್ಳಬಹುದು.ಪ್ಲಾಸ್ಮಾದ್ರವದ ಸೋರಿಕೆಯಿಂದಾಗಿರಕ್ತದಒತ್ತಡಕಡಿಮೆಯಾಗಿ, ಮೆದುಳು, ಕಿಡ್ನಿ ಮುಂತಾದ ಮುಖ್ಯ ಅಂಗಗಳಿಗೆರಕ್ತದ ಪೂರೈಕೆ ಕಡಿಮೆಯಾಗಿ ವಿಪರೀತ ವೈಕಲ್ಯಉಂಟಾಗಬಹುದು.
ರಕ್ತದ ಒತ್ತಡ( Blood pressure) ಕಡಿಮೆಯಾಗಬಹುದು. ಇದನ್ನುಡೆಂಗು ಶಾಕ್ ಸಿಂಡ್ರೋಮ್ ಎನ್ನುತ್ತಾರೆ. (Dengue Shok Syndrome)ಇದರಜೊತೆಗೆಅನ್ನನಾಳಗಳಲ್ಲಿ ರಕ್ತಸ್ರಾವವುಉಂಟಾಗ ಬಹುದು.ಕೇವಲ 5ಶೇಕಡಾ ಡೆಂಗೇಜ್ವರದ ರೋಗಿಗಳಲ್ಲಿ ಮಾತ್ರ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು.ಸಾಮಾನ್ಯವಾಗಿ ಮಕ್ಕಳು ಮತ್ತುಯುವಜನರಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಸಾಧ್ಯತೆಇದೆ.ಈ ತೀವ್ರತೆಯಅವಧಿಒಂದರಿಂದ 2ದಿನಗಳವರೆಗೆ ಮಾತ್ರ ಕಾಣಿಸಿಕೊಳ್ಳಬಹುದು.

ಚೇತರಿಕೆ ಅವಧಿ ಅಥವಾ(Recovery Phase)

ಈ ಅವಧಿ 2ರಿಂದ 3ದಿನಗಳ ವರೆಗೆಇರುತ್ತದೆ. ಈ ಅವಧಿಯಲ್ಲಿರಕ್ತದಿಂದ ಹೊರಡುವಎಲ್ಲಾ ದ್ರವಗಳು ಪುನಃ ರಕ್ತಕ್ಕೆ ಸೇರ ಬಹುದು. ವಿಪರೀತತುರಿಕೆ ಮತ್ತು ಚರ್ಮದಲ್ಲಿ ಗುಳ್ಳೆಗಳು ಕಾಣಿಸಿಕೊಳ್ಳಬಹುದು.ರೋಗಿಗಳಲ್ಲಿ ವಿಪರೀತ ಆಯಾಸ ಮತ್ತು ಸುಸ್ತು ಕಾಣಿಸಿಕೊಳ್ಳಬಹುದು.ರೋಗಿಗಳು ಬಹಳ ಬಳಲಿದಂತೆ ಮತ್ತು ಭ್ರಮಾ ಲೋಕದಲ್ಲಿದ್ದಂತೆ ಭಾಸವಾಗಬಹುದು.
ಹರಡುವುದು ಹೇಗೆ?
ಡೆಂಗೇಜ್ವರ, ‘ಡೆಂಗೆ’ ಎಂಬ ವೈರಾಣುವಿನಿಂದಉಂಟಾಗುತ್ತದೆ. ಈ ವೈರಾಣು“ಏಡಿಸ್” ಎಂಬ ಸೊಳ್ಳೆಗಳ ಮುಖಾಂತರಒಬ್ಬವ್ಯಕ್ತಿಯಿಂದಇನ್ನೊಬ್ಬನಿಗೆ ಹರಡುತ್ತದೆ.ಉಷ್ಣವಲಯದ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುವ ಈ ಸೊಳ್ಳೆ ಸಾಮಾನ್ಯವಾಗಿ ಹಗಲು ಹೊತ್ತಿನಲ್ಲಿಕಚ್ಚುತ್ತದೆ.ಹೆಚ್ಚಾಗಿ ಮುಂಜಾನೆ ಹೊತ್ತಿನಲ್ಲಿ ಮತ್ತು ಮುಸ್ಸಂಜೆ ಹೊತ್ತಿನಲ್ಲಿಕಚ್ಚುತ್ತದೆ. ಡೆಂಗೆಜ್ವರದಿಂದ ಬಳಲುತ್ತಿರುವ ವ್ಯಕ್ತಿಗೆಕಡಿದ ಬಳಿಕ, ಸುಮಾರು 8ರಿಂದ 10ದಿನಗಳಲ್ಲಿ ಡೆಂಗೆ ವೈರಾಣುಗಳನ್ನು ವ್ಯಕ್ತಿಯಿಂದ ವ್ಯಕ್ತಿಗೆ ಹರಡಿಸುತ್ತದೆ. ಏಡಿಸ್ ಸೊಳ್ಳೆ ಡೆಂಗೆ ವೈರಾಣುವಿನಿಂದ ಕೂಡಿದ್ದರೂ , ಸೊಳ್ಳೆಗೆ ಇದರಿಂದ ವ್ಯತಿರಕ್ತ ಪರಿಣಾಮವಾಗುವುದಿಲ್ಲ. ಏಡಿಸ್ ಸೊಳ್ಳೆ ಸಾಮಾನ್ಯವಾಗಿ ನಿಂತ ನೀರಲ್ಲಿ ಮೊಟ್ಟೆಇಡುತ್ತದೆ. ಮನೆ ಸುತ್ತಮುತ್ತಇರುವ ನೀರು ನಿಂತ ಜಾಗಗಳನ್ನು ಏಡಿಸ್ ಸೊಳ್ಳೆ ಬಯಸುತ್ತದೆ ಮತ್ತು ಮನುಷ್ಯರ ರಕ್ತವನ್ನೇ ಹೆಚ್ಚಾಗಿ ಬಯಸುತ್ತದೆ.ಇದಲ್ಲದೆಡೆಂಗೆ ವೈರಾಣು,ರಕ್ತಪೂರಣ (Blood Transfusion) sಮೂಲಕ ಮತ್ತು ಅಂಗಾಂಗ ಕಸಿಯ ಮುಖಾಂತರ ಹರಡುವ ಸಾಧ್ಯತೆಯೂಇರುತ್ತದೆ.

ತಡೆಗಟ್ಟುವುದು ಹೇಗೆ?

ಡೆಂಗೆ ವೈರಾಣುವಿಗೆ ಈ ವರೆಗೆ ಲಸಿಕೆಯನ್ನು ಕಂಡುಹಿಡಿಯಲಾಗಿಲ್ಲ. ಆ ಕಾರಣದಿಂದಲೇ, ಏಡಿಸ್ ಸೊಳ್ಳೆ ಕಡಿತವನ್ನುತಡೆಗಟ್ಟುವುದು ಮತ್ತು ಸೊಳ್ಳೆಗಳ ಸಂಖ್ಯೆಕಡಿಮೆಮಾಡುವತ್ತಎಲ್ಲರೂ ಗಮನ ಹರಿಸಬೇಕಾಗಿದೆ.

  1. ಮನೆ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.ಹೆಚ್ಚಾಗಿ ನಿಂತ ನೀರಲ್ಲಿಏಡಿಸ್ ಸೊಳ್ಳೆ ಸಂತಾನೋತ್ಪತ್ತಿ ಮಾಡುತ್ತದೆ. ಹೂಕುಂಡಗಳಲ್ಲಿ. ಮನೆಯ ಛಾವಣಿಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು. ಮನೆಯ ಅಕ್ಕಪಕ್ಕ ನೀರು ಸರಾಗವಾಗಿ ಚಲಿಸುವ ರೀತಿಯಲ್ಲಿ ನೋಡಿಕೊಳ್ಳಬೇಕು.
  2. ಮನೆಯ ಸುತ್ತಮುತ್ತಇರುವಂತಹ ಹಳೆ ಬಕೆಟ್ ಮತ್ತು ನೀರಿನ ಕ್ಯಾನ್‍ಗಳಲ್ಲಿ ಬೋರಲಾಗಿ ಹಾಕಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿಇಂತಹ ನೀರುತುಂಬುವ ವಸ್ತುಗಳನ್ನು ನೀರು ಬೀಳದಂತಹ ಸೂರಿನಡಿಂiÀiಲ್ಲಿಇಡಬೇಕು. ಹೂ ಕುಂಡಗಳ ಕೆಳಗಿರುವ ತಟ್ಟೆಗಳನ್ನು ತೆಗೆಯಬೇಕು. ಇಡಲೇ ಬೇಕಿದ್ದಲ್ಲಿ ಈ ತಟ್ಟೆಗಳನ್ನು ಚೆನ್ನಾಗಿತಿಕ್ಕಿ, ತೊಳೆದು ಸೊಳ್ಳೆಗಳ ತತ್ತಿಗಳು ಬೆಳೆಯದಂತೆ ನೋಡಿಕೊಳ್ಳಬೇಕು ಮತ್ತು ನೀರು ಶೇಕರಣೆಆಗದಂತೆ ನೋಡಿಕೊಳ್ಳಬೇಕು. ಹೂಕುಂಡಗಳಲ್ಲಿರುವ ಮಣ್ಣನ್ನು ಸಡಿಲವಾಗಿರುವಂತೆ ನೋಡಿಕೊಳ್ಳಬೇಕು. ಈ ಮಣ್ಣುಗಟ್ಟಿಯಾಗಿದ್ದಲ್ಲಿ ನೀರು ಸೋರಿ ಹೋಗುವುದಕ್ಕೆಅಡ್ಡಿಯಾಗಿ, ನೀರುತುಂಬಿಕೊಂಡು ಸೊಳ್ಳೆಗಳನ್ನು ಆಕರ್ಷಿಸಬಹುದು. ಎಡಿಸ್ ಸೊಳ್ಳೆ ಶುದ್ಧವಾದ ತಿಳಿಯಾದ ನಿಂತ ನೀರಿನಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಮನೆಯಯೊಳಗೆ ಅಲಂಕಾರಕ್ಕಾಗಿ ಬಳಸುವ ಹೂವಾನಿಗಳ ನೀರನ್ನೂ ದಿನವೂ ಬದಲಿಸಬೇಕು. ಮತ್ತು ಶುಭ್ರವಾಗಿ ಇಟ್ಟುಕೊಳ್ಳಬೇಕು.
  3. ಉದ್ದ ತೋಳಿನ ಅಂಗಿ, ಕಾಲುಮುಚ್ಚುವ ಪ್ಯಾಂಟ್ ಮತ್ತು ಕಾಲು ಚೀಲ ಧರಿಸಿದಲ್ಲಿ ಸೊಳ್ಳೆಗಳಿಂದ ಕಡಿಸಿಕೊಳ್ಳುವ ಸಾಧ್ಯತೆಕಡಿಮೆಯಿರುತ್ತದೆ. ಮೈ ತುಂಬಾ ಬಟ್ಟೆಧರಿಸಿ ಆದಷ್ಟು ಸೊಳ್ಳೆ ಕಚ್ಚದಂತೆ ನೋಡಿಕೊಳ್ಳಬೇಕು.
  4. ಕಡ್ಡಾಯವಾಗಿ ಸೊಳ್ಳೆ ಪರದೆಯನ್ನು ಬಳಸಬೇಕು. ಹಗಲು ಹೊತ್ತು ವಿಶ್ರಮಿಸುವಾಗಲೂ ಸೊಳ್ಳೆಯ ಸಾಂದ್ರತೆ ಜಾಸ್ತಿ ಇರುವ ಪ್ರದೇಶಗಳಲ್ಲಿ ಸೊಳ್ಳೆ ಪರದೆ ಬಳಸುವುದು ಸೂಕ್ತ.
  5. ಸೊಳ್ಳೆ ಮೈ ಮೇಲೆ ಕುಳಿತುಕೊಳ್ಳದೆಇರುವಂತಹಾ ಸೊಳ್ಳೆ ನಿರೋಧಕಅಥವಾ ವಿಕರ್ಷಕದ್ರಾವಣಗಳನ್ನು ಬಳಸಬಹುದು.
  6. ಕಿಟಿಕಿ ಮತ್ತುತೆರೆದ ಜಾಗಗಳಿಗೆ ನೆಟ್ ಬಳಸಿದಲ್ಲಿ ಸೊಳ್ಳೆಗಳನ್ನು ಮನೆಯೊಳಗೆ ಬಾರದಂತೆತಡೆಯಬಹುದು
  7. ಅತ್ಯಂತ ವಾಸನೆಯುಕ್ತ ಸಾಮೂನು ಮತ್ತು ಶೃಂಗಾರಯುಕ್ತ ದ್ರವ್ಯಗಳನ್ನು ಬಳಸುವುದನ್ನು ಕಡಿಮೆ ಮಾಡಬೇಕು. ಇವುಗಳು ಕೂಡಾ ಕೆಲವೊಮ್ಮೆ ಸೊಳ್ಳೆಗಳನ್ನು ಆಕರ್ಷಿಸಬಹುದು.
  8. ಮನೆಯ ಸುತ್ತಮುತ್ತಇರುವ ನೀರಿನ ಶೇಕರಣೆಯಾಗುವ ಜಾಗಗಳನ್ನು ಕೀಟನಾಶಕ ಸೊಳ್ಳೆ ನಾಶಕ ದ್ರವ್ಯಗಳಿಂದ ಶುದ್ಧಿಕರಿಸಬೇಕು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿಆಗದಂತೆ ನೋಡಿಕೊಳ್ಳಬೇಕು. ಮನೆಯೊಳಗಿನ ಮತ್ತು ಸುತ್ತಮುತ್ತಲಿನ ನೀರು ಸಂಗ್ರಹಿಸುವ ಮತ್ತು ಸಂಗ್ರಹ ವಾಗುವ ಎಲ್ಲಾ ವಸ್ತುಗಳಲ್ಲೂ ಶುಭ್ರವಾಗಿ, ಇಟ್ಟುಕೊಳ್ಳುಬೇಕು. ಮೂರುದಿನಗಳಿಗೊಮ್ಮೆ ಸಂಗ್ರಹವಾದ ನೀರನ್ನು ಖಾಲಿಮಾಡಲೇಬೇಕು ಮತ್ತು ಸೊಳ್ಳೆ ಬೆಳೆಯದಂತೆ ನೋಡಿಕೊಳ್ಳಬೇಕು.
  9. ಎಲ್ಲೆಂದರಲ್ಲಿ ಘನತ್ಯಾಜ್ಯಗಳನ್ನು ಎಸೆಯಬಾರದು. ವಿಶೇಷವಾಗಿ ಬಹು ಮಹಡಿ ಕಟ್ಟಡಗಳಲ್ಲಿ ಘನತ್ಯಾಜ್ಯಗಳು, ನೀರಿನ ಸರಾಗ ಹರಿಕೆಗೆ ಅಡ್ಡಿಮಾಡಿ, ನೀರು ಸಂಗ್ರಹಕ್ಕೆಕಾರಣವಾಗಿ, ಸೊಳ್ಳೆಗಳ ಉತ್ಪತ್ತಿಗೆ ಪರೋಕ್ಷವಾಗಿಕಾರಣವಾಗುತ್ತದೆ.
  10. ನಗರೀಕರಣ, ಕೈಗಾರೀಕರಣಗಳಿಂದಾಗಿ, ನಗರ ಪ್ರದೇಶಗಳಲ್ಲಿಯೂ ಸೊಳ್ಳೆಗಳಿಗೆ ಪೂರಕವಾದ ವಾತಾವರಣ ನಿರ್ಮಾವಾಗುತ್ತದೆ. ಸ್ವಚ್ಛತೆ ಮತ್ತುನೈರ್ಮಲ್ಯಕ್ಕೆ ಹೆಚ್ಚು ಆಧ್ಯತೆ ನೀಡಿ, ಎಲ್ಲಿಯೂ ಸೊಳ್ಳೆಗಳ ಸಂತಾನೋತ್ಪತ್ತಿಗೆ ಪೂರಕವಾದ ವಾತಾವರಣ ನಿರ್ಮಾಣವಾಗದಂತೆ ನೋಡುವ ಸಾಮಾಜಿಕಜವಾಬ್ದಾರಿ ಪ್ರತಿಯೊಬ್ಬ ನಾಗರೀಕರ ಮೇಲೆ ಇದೆ.

ಚಿಕಿತ್ಸೆ ಹೇಗೆ?

ಜ್ವರ ಬಂದಕೂಡಲೇ ವೈದ್ಯರನ್ನುಕಾಣಬೇಕು. self medication ಅಥವಾ ಸ್ವಯಂ ಮದ್ದುಗಾರಿಕೆಯಾವತ್ತೂ ಮಾಡಬಾರದು. ಯಾವ ಕಾರಣದಿಂದಲೂ aspirin ಗುಳಿಗೆ ತೆಗೆದುಕೊಳ್ಳಬಾರದು.ಸೊಳ್ಳೆಕಡಿತ ನಿಮ್ಮ ಗಮನಕ್ಕೆ ಬಂದಿದಲ್ಲಿ ವ್ಶೆದ್ಯರಿಗೆ ತಿಳಿಸಬೇಕು.ಸಾಮಾನ್ಯವಾಗಿ ಜ್ವರವನ್ನು, ವೈದ್ಯರ ಸೂಚನೆಯಂತೆ ಗುಣಪಡಿಸಿಕೊಳ್ಳಬೇಕು.
ವಿಪರೀತ ಜ್ವರ, ತುರಿಕೆ, ತಲೆನೋವು, ರಕ್ತಸ್ರಾವವಿದ್ದಲ್ಲಿಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ನೀಡಬೇಕಾಗಬಹುದು. ಹೆಚ್ಚು ಹೆಚ್ಚು ದ್ರವಾಹಾರ ತೆಗೆದುಕೊಳ್ಳಬೇಕು. ಎಲ್ಲವನ್ನೂ ವೈದ್ಯರ ಸಲಹೆಯಂತೆ ನಡೆಯಬೇಕು.ವೈದ್ಯರ ಸಲಹೆ ಇಲ್ಲದೆ, ಸಾಮಾನ್ಯ ಜ್ವರ ಎಂದುಕೊಂಡು ಸ್ವಂತ ಮದ್ದುಗಾರಿಕೆ ಮಾಡುವುದ ಖಂಡಿತ ಸಹ್ಯವಲ್ಲ. ಬರೀ ಜ್ವರ ಎಂದು ಉದಾಸೀನ ತೋರಿದಲ್ಲಿ,ಜೀವಕ್ಕೆತೊಂದರೆಯಾಗಬಹುದು.ತೀವ್ರತೆಯ ಅವಧಿಯಲ್ಲಿ,ರಕ್ತದ ಒತ್ತಡ ಕಡಿಮೆಯಾದಲ್ಲಿ ಅಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಅತೀಅಗತ್ಯ. ಅದೇರೀತಿ ಪ್ಲೇಟ್‍ಲೇಟ್ (Platelet) ರಕ್ತಕಣಗಳ ಸಂಖ್ಯೆಕಡಿಮೆಯಾದಲ್ಲಿರಕ್ತಪೂರಣ (Blood Transfusion)ಅತೀ ಅಗತ್ಯ.
ಒಟ್ಟಿನಲ್ಲಿ ಡೆಂಗೆಜ್ವರ ಉಳಿದ ಮಾಮೂಲಿ ಜ್ವರಕ್ಕಿಂತ ಭಿನ್ನವಾಗಿದ್ದು, ನುರಿತ ವೈದ್ಯರ ಸಲಹೆ. ಮಾರ್ಗದರ್ಶನ ಮತ್ತು ಚಿಕಿತ್ಸೆ ಅತೀ ಅಗತ್ಯ. ನಿರ್ಲಕ್ಷ ಮಾಡಿದ್ದಲ್ಲಿಜೀವಕ್ಕೆ ಸಂಚಕಾರ ಬರುವ ಸಾಧ್ಯತೆಯೂಇದೆ.

ಡಾ| ಮುರಲೀ ಮೋಹನ್‍ಚೂಂತಾರು