ಹಳೆಗೇಟು: ದ್ವಿಚಕ್ರ ವಾಹನ ಸವಾರರ ಜೀವ ಬಲಿಗಾಗಿ ಕಾಯುತ್ತಿದೆಯೇ ಹೆದ್ದಾರಿಯ ತಿರುವು ?

0

ಮಳೆ ನೀರಿಗೆ ಕೊಚ್ಚಿ ಬಂದು ರಸ್ತೆ ಬದಿ ಹರಡಿರುವ ಮರಳು ಮತ್ತು ಕಲ್ಲಿನ ಹುಡಿಗಳು

ಮಾಣಿ ಮೈಸೂರು ಹೆದ್ದಾರಿ ಹಳೆಗೇಟು ಸಮೀಪ ಮಳೆಗೆ ಕೊಚ್ಚಿ ಬಂದಿರುವ ಮರಳು ಮತ್ತು ಕಲ್ಲಿನ ಹುಡಿಗಳು ರಸ್ತೆ ಬದಿಯಲ್ಲಿ ಹರಡಿ ನಿಂತಿದ್ದು ಅಪಾಯಕಾರಿ ಮುನ್ಸೂಚನೆಯನ್ನು ನೀಡುತ್ತಿದೆ.

ಈ ಭಾಗದಲ್ಲಿ ತಿರುವು ರಸ್ತೆ ಆಗಿರುವ ಹಿನ್ನೆಲೆಯಲ್ಲಿ ಬೃಹತ್ ವಾಹನಗಳು ಸಂಚರಿಸುವ ವೇಳೆ ದ್ವಿಚಕ್ರ ವಾಹನ ಸವಾರರು ಇಲ್ಲಿ ಅಪ್ಪಿ ತಪ್ಪಿ ಬ್ರೇಕ್ ಹಾಕಿದಲ್ಲಿ ಸ್ಕಿಡ್ದಾಗಿ ಬೀಳುವುದಂತೂ ಖಂಡಿತ. ಅಲ್ಲದೆ ಎರಡು ಕಡೆಯಿಂದಲೂ ಬರುವ ವಾಹನಗಳು ಶರವೇಗದಲ್ಲಿ ಹಾದು ಹೋಗುತ್ತಿದ್ದು ಸಣ್ಣಪುಟ್ಟ ವಾಹನಗಳು ಸೈಡ್ ಕೊಡುವಾಗ ತಿರುವಿನಲ್ಲಿ ಈ ರೀತಿಯ ಸಮಸ್ಯೆ ಇರುವುದು ಜೀವ ಕೈಯಲ್ಲಿ ಹಿಡಿದು ಚಲಿಸುವ ಆತಂಕ ಎದುರಾಗಿದೆ.

ಅಲ್ಲದೆ ನೂರಾರು ಸಾರ್ವಜನಿಕರು, ವಿದ್ಯಾರ್ಥಿಗಳು ರಸ್ತೆ ಬದಿಯಲ್ಲಿ ನಡೆದಾಡುತ್ತಿದ್ದು ಹೆಚ್ಚಿನ ಅಪಾಯ ಸಂಭವಿಸುವ ಮುನ್ನ ಸಂಬಂಧಪಟ್ಟ ಇಲಾಖೆಯವರು ಅಥವಾ ಸ್ಥಳೀಯ ಪಂಚಾಯತ್ ಸದಸ್ಯರು ಕ್ರಮ ಕೈಗೊಳ್ಳಬೇಕಾಗಿದೆ.