ಪೆರುವಾಜೆ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಗಿಡ ನಾಟಿ ಕಾರ್ಯಕ್ರಮ

0

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಸುಳ್ಯ ಬೆಳ್ಳಾರೆ ವಲಯ
ಶೌರ್ಯವಿಪತ್ತು ನಿರ್ವಹಣಾ ಘಟಕ ರಚಿಸಿ 5 ನೇ ವರ್ಷದ ವಾರ್ಷಿಕೋತ್ಸವದ ಸಲುವಾಗಿ ಶೌರ್ಯವಿಪತ್ತು ಘಟಕ ಬೆಳ್ಳಾರೆ ವಲಯದ ವತಿಯಿಂದ ಶ್ರೀ ಜಲದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ಗಿಡ ನಾಟಿ ಕಾರ್ಯಕ್ರಮ ನಡೆಸಲಾಯಿತು.


ಈ ಸಂಧರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಪದ್ಮನಾಭ ಶೆಟ್ಟಿ ಪೆರುವಾಜೆ ,ಒಕ್ಕೂಟದ ಅಧ್ಯಕ್ಷ ಸುಂದರ ನಾಯ್ಕ, ವಲಯದ ಮೇಲ್ವಿಚಾರಕಿ ಶ್ರೀಮತಿ ವಿಶಾಲ ಕೆ, ದೇವಸ್ಥಾನ ಸಿಬ್ಬಂದಿ ಪಿ. ವಸಂತ್ ಶೌರ್ಯವಿಪತ್ತು ಘಟಕ ಸಂಯೋಜಕರದ ರಮೇಶ ಎಂ., ಪ್ರತಿನಿಧಿಯಾದ ಶ್ರೀಮತಿ ಹರೀಣಾಕ್ಷಿ, ಘಟಕದ ಸದಸ್ಯರಾದ ಶೇಷಪ್ಪ ನಾಯ್ಕ, ನಾರಾಯಣ ನಾಯ್ಕ, ರಾಜೇಶ ನಾಯ್ಕ ರವರು ಗಿಡ ನಾಟಿ ಯಲ್ಲಿ ಪಾಲ್ಗೊಂಡಿದ್ದರು.