ಏಣಾವರ ವಯನಾಟ್ ಕುಲವನ್ ದೈವಸ್ಥಾನದ ದಾರಂದ ಮುಹೂರ್ತ

0

ಆಲೆಟ್ಟಿ ಗ್ರಾಮದ ಏಣಾವರ ಶ್ರೀ ವಯನಾಟ್ ಕುಲವನ್ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಜೂ.29 ರಂದು ಬೆಳಗ್ಗೆ ದಾರಂದ ಮುಹೂರ್ತವು ನಡೆಯಿತು.


ಶಿಲ್ಪಿಗಳಾದ ಲೋಹಿತಾಶ್ವ ಆಚಾರಿ ಮತ್ತು ರಾಜೀವ ಆಚಾರಿಯವರ ನೇತೃತ್ವದಲ್ಲಿ ಕಾರ್ಯಕ್ರಮ ನೆರವೇರಿತು.


ಈ ಸಂದರ್ಭದಲ್ಲಿ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೂ ತೀಯ ಸಮಾಜ ಬಾಂಧವರು ಉಪಸ್ಥಿತರಿದ್ದರು.