ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿರಿಯ ಸದಸ್ಯೆಯಾಗಿದ್ದು, ಜು.4 ರಂದು ನಿಧನರಾದ ಶ್ರೀಮತಿ ಕಮಲ ರವರಿಗೆ ಮರಣ ಸಾಂತ್ವನ ನಿಧಿ ರೂ.9000/- ವನ್ನು ಮೃತರ ಪುತ್ರರಾದ ಪಂಚಾಯತ್ ಸಿಬ್ಬಂದಿ ಜನಾರ್ದನ, ಆನಂದ ಮತ್ತು ಮನಮೋಹನ ರವರಿಗೆ ಜು.4 ರಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ ವಿತರಿಸಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಜಗದೀಶ ಕಕ್ಕೆಬೆಟ್ಟು, ವಿಜಯಕುಮಾರ್ ಉಬರಡ್ಕ, ಉಪಸ್ಥಿತರಿದ್ದರು.