ಪೆರಾಜೆಯಲ್ಲಿ ಅಕ್ರಮ ಗೋಸಾಗಾಟ – ಓರ್ವನ ಬಂಧನ ಇಬ್ಬರು ಪರಾರಿ

0

ಪಿಕಪ್ ವಾಹನದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಅರಿತ ಪೊಲೀಸರು ದಾಳಿ ನಡೆಸಿದ್ದು, ಇಬ್ಬರು ಪರಾರಿಯಾಗಿ, ಓರ್ವನ ಬಂಧನವಾದ ಘಟನೆ ಪೆರಾಜೆಯಲ್ಲಿ ಜು.10ರಂದು ರಾತ್ರಿ ಸಂಭವಿಸಿದೆ.

ಪೆರಾಜೆ ಗ್ರಾಮದ ಕುಂಬಳಚೇರಿ ಕುಂದಲ್ಪಾಡಿ – ಕೂರ್ನಡ್ಕ ರಸ್ತೆಯ ಮೂಲಕ ಕೇರಳಕ್ಕೆ KA 12 8020 ಪಿಕಪ್ ವಾಹನದಲ್ಲಿ ಗೋವುಗಳನ್ನು ಮೂವರು ವ್ಯಕ್ತಿಗಳು ಸಾಗಿಸುತ್ತಿರುವ ಬಗ್ಗೆ ಹಿಂದೂ ಸಂಘಟನೆಯವರು ಮಡಿಕೇರಿ ಗ್ರಾಮಾಂತರ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಕಾರ್ಯಾಚರಣೆ ನಡೆಸಿ, ಪಿಕಪ್ ವಾಹನವನ್ನು ವಶಪಡಿಸಿಕೊಂಡಿದ್ದು, ಗೋವುಗಳನ್ನು ರಕ್ಷಿಸಿದ್ದಾರೆ.
ಈ ವೇಳೆ ಪಿಕಪ್ ವಾಹನದಲ್ಲಿದ್ದ ಪೆರಾಜೆಯ ಸಚಿನ್ ಹಾಗೂ ನಿತಿನ್ ಎಂಬವರು ಓಡಿ ತಪ್ಪಿಸಿಕೊಂಡಿದ್ದು, ಪಿಕಪ್ ಚಾಲಕ ಸುಳ್ಯದ ಕೇರ್ಪಳದಲ್ಲಿ ವಾಸವಿರುವ ಕಲ್ಲಪಳ್ಳಿಯ ವಿನೋದ್ ಎಂಬಾತನನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.

ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದುಬಂದಿದೆ. ಕೊಡಗು ಸಂಪಾಜೆ ಹಾಗೂ ಮಡಿಕೇರಿ ಠಾಣೆಯ ಪೊಲೀಸ್ ಸಿಬ್ಬಂದಿಗಳಾದ ರಾಜೇಶ್, ರವಿಕುಮಾರ್, ನವೀನ್ ಕುಮಾರ್, ಬಸವರಾಜ್, ಪ್ರವೀಣ್ ಕುಮಾರ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.