ಬಳ್ಪದಲ್ಲಿ ಶ್ರೀವರ ಕ್ಲಿನಿಕ್ ಶುಭಾರಂಭ

0

ಬಳ್ಪದ ಕುಳ ಕಾಂಪ್ಲೆಕ್ಸ್ ನಲ್ಲಿ ಡಾ.ರವಿಶಂಕರ್.ಕೆ.(ಬಿ.ಎ.ಎಮ್.ಎಸ್., ಎಂ.ಡಿ) ರವರ ಶ್ರೀವರ ಕ್ಲಿನಿಕ್ ಜು. 12 ರಂದು ಶುಭಾರಂಭ ಗೊಂಡಿತು.

ಪಂಜದ ಹಿರಿಯ ವೈದ್ಯ ಡಾ. ರಾಮಯ್ಯ ಭಟ್ ದೀಪ ಬೆಳಗಿಸಿ ಉದ್ಘಾಟಿಸಿದರು.

ಈ ವೇಳೆ ಈಶ್ವರ್ ಭಟ್ ಕೆ ಮತ್ತು ಶ್ರೀಮತಿ ಲಲಿತಾ ಕುಮಾರಿ, ಸಂಜಯ್ ಯಸ್ ಮತ್ತು ಶ್ರೀಮತಿ ಪೂರ್ಣಿಮಾ ಮಕ್ಕಿ ಮನೆ ಮಡಿಕೇರಿ, ಕೆ.ರಾಮಕೃಷ್ಣ ಭಟ್,ಶಂಕರನಾರಾಯಣ ಮತ್ತು ಶ್ರೀಮತಿ ಜಯಲಕ್ಷ್ಮಿ ಕೋಟೆಮುಂಡುಗಾರು, ಸುಬ್ರಹ್ಮಣ್ಯ ಮತ್ತು ಶ್ರೀಮತಿ ಶ್ಯಾಮಲಾ ಬಲ್ಯ, ಮುರಳಿ ಕೃಷ್ಣ ಮುಕುಡ ಹೊಳೆಕ್ಕರೆ , ಸುಬ್ರಹ್ಮಣ್ಯ ಮುಕುಡ ಹೊಳೆಕ್ಕರೆ, ರಜನೀಶ್ ಕೋಟೆ ಮುಂಡುಗಾರು, ಕುಳ ಕಾಂಪ್ಲೆಕ್ಸ್ ಮಾಲಕರಾದ ರಾಧಾಕೃಷ್ಣ ಕುಳ ಮತ್ತು ಶ್ರೀಮತಿ ಉಷಾ ಕುಳ ಮೊದಲಾದವರು ಉಪಸ್ಥಿತರಿದ್ದರು.


ಅರ್ಚಕ ರಾಮಚಂದ್ರ ಭಟ್ ರವರು ವೈಧಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.ಕಾರ್ಯಕ್ರಮದಲ್ಲಿ ಡಾ.ರವಿಶಂಕರ್.ಕೆ ಸ್ವಾಗತಿಸಿದರು ಮತ್ತು ವಂದಿಸಿದರು.