ಆದಿ ದ್ರಾವಿಡ ಸಮಾಜ ಸೇವಾ ಸಂಘ “ಆಟಿಡೊಂಜಿ ದಿನ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕರ್ನಾಟಕ ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.) ಸುಳ್ಯ ಘಟಕ ಮತ್ತು ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.)ಮಹಿಳಾ ಘಟಕ ಸುಳ್ಯ ತಾಲೂಕು.ದ.ಕ.ಇದರ ವತಿಯಿಂದ ಆಗಸ್ಟ್ 11 ರಂದು ನಡೆಯಲಿರುವ “ಆಟಿಡೊಂಜಿ ದಿನ” ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜು 14 ರಂದು ಕೆ.ವಿ.ಜಿ ಪುರಭವನದಲ್ಲಿ ತಾಲೂಕು ಸಮಿತಿಯ ಅಧ್ಯಕ್ಷರಾದ ಬಾಲಕೃಷ್ಣದೊಡ್ಡೇರಿ ಉಪಸ್ಥಿತಿಯಲ್ಲಿ ಬಿಡುಗಡೆಗೊಳಿಸಲಾಯಿತು.

ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಮೋನಪ್ಪ ರಾಜಾರಾಂಪುರ, ಪ್ರಧಾನ ಕಾರ್ಯದರ್ಶಿ ಸೀತರಾಮ ಮೊರೆಂಗಲ್ಲು, ಕೋಶಾಧಿಕಾರಿ ಶಿವಪ್ಪ ಕೋಡ್ತಿಲು, ಗೌರವ ಸಲಹೆಗಾರರು ರಾಘವ ಅಜ್ಜಾವರ, ಚೋಮ ನಾವೂರು,ಜಿಲ್ಲಾ ಸಮಿತಿ ಸದಸ್ಯ ವಿಜಯ ಆಲಡ್ಕ, ರಾಜ್ಯ ಸಮಿತಿ ಸದಸ್ಯ ದಿಲೀಪ್ ಕೊಡಿಯಾಲ ಬೈಲು, ಮಲ್ಲೇಶ್ ಕೂಡೆಕಲ್ಲು, ಶ್ರವಣ್ ಕುಮಾರ್ ಕೊಡಿಯಾಲ ಬೈಲು, ಗಿರೀಶ್ ಮಡಪ್ಪಾಡಿ, ಸುಪ್ರೀತ್ ಅಜ್ಜಾವರ, ಮಹಿಳಾ ಘಟಕ ಅಧ್ಯಕ್ಷರಾದ ಕುಸುಮಾ ಬಿಳಿಯಾರು, ಪ್ರಧಾನ ಕಾರ್ಯದರ್ಶಿ ನಂದಿನಿ ಕೋಡ್ತಿಲು, ಕೋಶಾಧಿಕಾರಿ ಅಜ್ಜಾವರ ಮತ್ತು ಜಿಲ್ಲೆ, ತಾಲೂಕು ಸಮಿತಿಯ ಎಲ್ಲಾ ಪದಾಧಿಕಾರಿಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು.