ಮುಳ್ಯ – ಅಟ್ಲೂರು : ವರಮಹಾಲಕ್ಷ್ಮಿ ಪೂಜಾ ಸಮಿತಿ ಅಸ್ತಿತ್ವಕ್ಕೆ

0

ಅಧ್ಯಕ್ಷರಾಗಿ ಶ್ರೀಮತಿ ಜಯಂತಿ, ಪ್ರ.ಕಾರ್ಯದರ್ಶಿ ಶ್ರೀಮತಿ ರಮ್ಯ

ಅಜ್ಜಾವರ ಗ್ರಾಮದ ಮುಳ್ಯ – ಅಟ್ಲೂರಿನಲ್ಲಿ ನೂತನವಾಗಿ ಶ್ರೀ ಗೌರಿ ವರಮಹಾಲಕ್ಷ್ಮಿ ಪೂಜಾ ಸಮಿತಿಯು ರಚನೆಗೊಂಡಿದೆ.
ಮುಳ್ಯ – ಅಟ್ಲೂರು ಶ್ರೀ ಮಹಾಗಣಪತಿ ಭಜನಾ ಮಂದಿರದ ವಠಾರದಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡೆಯಿತು.

ನೂತನ ಸಮಿತಿಯ ಅಧ್ಯಕ್ಷರಾಗಿ ಶ್ರೀಮತಿ ಜಯಂತಿ ಅಚ್ಚುತ ಅಟ್ಲೂರು, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಪ್ರಭಾವತಿ ಸುಧಾಮ ಬೂಡುಮಕ್ಕಿ, ಶ್ರೀಮತಿ ಪಾರ್ವತಿ ವಿಶ್ವನಾಥ್ ಕುಂಚಡ್ಕ , ಪ್ರಧಾನ ಕಾರ್ಯದರ್ಶಿ ಶ್ರೀಮತಿ ರಮ್ಯ ಹರೀಶ್ ಮುಳ್ಯ, ಜತೆ ಕಾರ್ಯದರ್ಶಿ ಶ್ರೀಮತಿ ಮಮತ ಹರೀಶ್ ಅಟ್ಲೂರು, ಕೋಶಾಧಿಕಾರಿ ಶ್ರೀಮತಿ ನಾಗರತ್ನ ದಯಾನಂದ್ ಮುಳ್ಯ ಹೊಸಗದ್ದೆ, ಹಾಗೂ 43 ಮಂದಿ ಮಹಿಳಾ ಸದಸ್ಯರ ಆಯ್ಕೆ ನಡೆಯಿತು.


ಕಾರ್ಯಕ್ರಮದಲ್ಲಿ ರಾಷ್ಟ್ರ ಸೇವಿಕಾ ಜಿಲ್ಲಾ ಸೇವಾ ಪ್ರಮುಖ್ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಉಪಸ್ಥಿತರಿದ್ದು ಪೂಜಾ ಮಹತ್ವ ವಿವರಿಸಿದರು.
ರುದ್ರಪ್ಪ ಗೌಡ, ಅಚ್ಚುತ ಅಟ್ಲೂರು, ಜಯರಾಮ ನಡುಬೆಟ್ಟು, ವಿಶ್ವನಾಥ್ ಮುಳ್ಯ ಮಠ, ನಾಗರಾಜ್ ಮುಳ್ಯ, ಹರಿಪ್ರಕಾಶ್ ಮುಳ್ಯ, ಪ್ರಕಾಶ್ ತೋರಣಗುಂಡಿ, ಶರತ್ ಮಠ, ವಿಶ್ವನಾಥ್ ಕುಂಚಡ್ಕ, ಇತರರು ಪಾಲ್ಗೊಂಡರು. ದೇವಿಪ್ರಸಾದ್ ಅತ್ಯಾಡಿ ಕಾರ್ಯಕ್ರಮ ನಿರೂಪಿಸಿದರು.