ತೆಂಗಿನಕಾಯಿ ಕಳವುಗೈದಾತನನ್ನು ಪೋಲೀಸರಿಗೊಪ್ಪಿಸಿದ ಯಜಮಾನ

0

ಮನೆಗೆ ಕೆಲಸಕ್ಕೆ ಬರುತ್ತಿದ್ದ ಕೆಲಸದಾಳು ತೆಂಗಿನಕಾಯಿ ಕದ್ದು ಸಿಕ್ಕಿಬಿದ್ದ ಘಟನೆ ಮಂಡೆಕೋಲಿನಿಂದ ವರದಿಯಾಗಿದೆ.

ಮಂಡೆಕೋಲು ಬರೆಮೇಲು ಜನಾರ್ದನ ಗೌಡರ ಮನೆಗೆ ಬರುತ್ತಿದ್ದ ಕೆಲಸದಾಳು ತೆಂಗಿನಕಾಯಿ ಕಳುವುಗೈದಿದ್ದು, ಈ ಕುರಿತು ಪೋಲೀಸರಿಗೆ ದೂರಿಕೊಂಡಿದ್ದರು. ಈ ದೂರಿನ ಮೇರೆಗೆ ಪೋಲೀಸರು ಆತನನ್ನು ವಶಕ್ಕೆ ಪಡೆದಿರುವುದಾಗಿ ತಿಳಿದುಬಂದಿದೆ.