ಸುಳ್ಯ 56 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆ

0

ಸುಳ್ಯ ಶ್ರೀಸಿದ್ಧಿವಿನಾಯಕ ಸೇವಾ ಸಮಿತಿ , ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಇದರ ಆಶ್ರಯದಲ್ಲಿ ಸುಳ್ಯದ ಚೆನ್ನಕೇಶವ ದೇವಸ್ಥಾನದಲ್ಲಿ ಸೆ.7 ರಿಂದ 11 ರ ತನಕ ನಡೆಯಲಿರುವ 56 ನೇ ವರ್ಷದ ಗಣೇಶೋತ್ಸವದ ಆಮಂತ್ರಣ ಪತ್ರ ಬಿಡುಗಡೆಯು
ಶ್ರೀ ಚೆನ್ನಕೇಶವ ದೇವಸ್ಥಾನದಲ್ಲಿ
ಆ.4 ರಂದು ಬಿಡುಗಡೆ ಮಾಡಲಾಯಿತು.

ದೇವಸ್ಥಾನದ ಅನುವಂಶಿಕ ಮೊಕ್ತೇಸರರ ಪೈಕಿ ಕೃಪಾಶಂಕರ ತುದಿಯಡ್ಕ ರವರು ಪ್ರಾರ್ಥಿಸಿ, ಅರ್ಚಕರು ಪೂಜಾ ಕಾರ್ಯ ನೆರವೇರಿಸಿದರು.
ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪಿ.ಕೆ.ಉಮೇಶ್ ರವರು ಆಮಂತ್ರಣ ಪತ್ರ ಬಿಡುಗಡೆಗೊಳಿಸಿದರು.
ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಅಧ್ಯಕ್ಷ ದಿನೇಶ್ ಕುಮಾರ್ ಕೆ.ಸಿ, ಗೌರವಾಧ್ಯಕ್ಷ ಸೋಮನಾಥ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ಲತಾ ಮಧೂಸೂದನ, ಕಾರ್ಯದರ್ಶಿ ಭರತ್ ಪಿ.ಯು , ಖಜಾಂಜಿ ಶಿವರಾಮ ಕೇರ್ಪಳ, ಬೆಳ್ಯಪ್ಪ ಗೌಡ ಬೀರಮಂಗಲ, ಸಮಿತಿ ಟ್ರಸ್ಟಿಮಧುಸೂದನ್ ಕುಂಭಕೋಡು,
ಗೋಪಾಲಕೃಷ್ಣ ಕೆ.ಎಸ್, ಜಿ.ಜಿ.ನಾಯಕ್,
ಶಶಿಧರ ಎಂ.ಜೆ, ಮಾಧವ ಗೌಡ, ದಾಮೋದರ ಮಂಚಿ, ಸೋಮನಾಥ ಕೇರ್ಪಳ, ಶೀನಪ್ಪ ಬಯಂಬು,ನಾರಾಯಣ ಶಾಂತಿನಗರ,ಶ್ರೀಮತಿ ಮಮತಾ ಕೈಲಾಸ್ ಶೆಣೈ,ಶ್ರೀಮತಿ ಗಿರಿಜಾ ಹಾಗೂ ಜಂಟಿ ಸಮಿತಿಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.