ಚೆಂಬು: ಊರುಬೈಲಿನಲ್ಲಿ ಕೃಷಿ ತೋಟಗಳಿಗೆ ಕಾಡಾನೆ ದಾಳಿ

0

ಒಂಟಿ ಸಲಗದ ನಿರಂತರ ದಾಳಿಯಿಂದ ಕಂಗಾಲಾದ ಕೃಷಿಕರು

ಚೆಂಬು ಗ್ರಾಮದ ಊರುಬೈಲಿನಲ್ಲಿ ಕೃಷಿಕರ ತೋಟಗಳಿಗೆ ಕಾಡಾನೆ ದಾಳಿ ಮಾಡಿ ಕೃಷಿ ಬೆಳೆಗಳನ್ನು ನಾಶ ಮಾಡಿದ್ದು, ನಿರಂತರವಾಗಿ ಒಂಟಿ ಸಲಗದ ದಾಳಿಯಿಂದ ಆ ಭಾಗದ ಕೃಷಿಕರು ಕಂಗಾಲಾಗಿದ್ದಾರೆ.

ಊರುಬೈಲಿನ ನಿಡಿಂಜಿ ವಾಸುದೇವ ನಿಡಿಂಜಿ ಕುಶಾಲಪ್ಪ ಅವರ ತೋಟಗಳಿಗೆ ಕಾಡಾನೆ ದಾಳಿ ನಡಿಸಿದ್ದು, ಬಾಳೆ, ಅಡಿಕೆ, ತೆಂಗಿನ ಸಸಿಗಳಿಗೆ ಹಾನಿ ಮಾಡಿರುವುದಾಗಿ ತಿಳಿದುಬಂದಿದೆ.