ಅಜ್ಜಾವರದಲ್ಲಿ ಆಟಿ ಆಚರಣೆ ಮತ್ತು ಸನ್ಮಾನ ಕಾರ್ಯಕ್ರಮ

0

ಧನಲಕ್ಷ್ಮೀ ಮಹಿಳಾ ಮಂಡಲ ಅಜ್ಜಾವರ ಇದರ ವತಿಯಿಂದ ಆ.3ರಂದು ಶ್ರೀ ಶಂಕರ ಭಾರತಿ ವೇದಪಾಠ ಶಾಲೆಯಲ್ಲಿ ಶ್ರೀಮತಿ ನಳಿನಾಕ್ಷಿ ಪ್ರಸಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮ ವನ್ನು ಶ್ರೀ ಮಹಿಷಮರ್ದಿನೀ ದೇವಸ್ಥಾನದ ಭಾಸ್ಕರ ರಾವ್ ಬಯಂಬು ಕಾರ್ಯಕ್ರಮ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯಲ್ಲಿ ಆಯ್ಕೆ ಯಾದ ಯೋಗ ಪಟ್ಟು ವಿದ್ಯಾರ್ಥಿಗಳಾದ ಮೂರನೇ ತರಗತಿ ವಿಧಾತ್ ಮತ್ತು ಪ್ರಥಮ ಪಿ ಯು ಸಿ ವಿದ್ಯಾರ್ಥಿನಿ ಕ್ಷಮ ಇವರನ್ನು ಸನ್ಮಾನಿಸಲಾಯಿತು. ಈ ಸಂರ್ದರ್ಭದಲ್ಲಿ ಜಾನಪದ ಗೀತೆ ಮತ್ತು ಲಕ್ಕಿ ಗೇಮು ಸ್ಪರ್ಧೆ ನಡೆಸಲಾಯಿತು.

ವೇದಿಕೆಯಲ್ಲಿ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ಹರಿಣಾಕ್ಷಿ ಎಸ್ ರೈ, ಗೌರವ ಅಧ್ಯಕ್ಷೆ ಶಶ್ಮಿ ಭಟ್ , ಸ್ಥಾಪಕಾಧ್ಯಕ್ಷೆ ಶ್ರೀಮತಿ ಜಯಂತಿ ಜನರ್ದನ್ ಉಪಸ್ಥಿತರಿದ್ದರು. ಕಾರ್ಯದರ್ಶಿ ವಿಶಾಲ ಸೀತಾರಾಮ ಕರ್ಲಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು. ಸೀತಾಲಕ್ಷ್ಮಿ ಪ್ರಾರ್ಥಿಸಿದರು. ವೇದಾವತಿ ಬಾಲಚಂದ್ರ ವಂದಿಸಿದರು. ಶ್ವೇತ ಸ್ವಾಗತಿಸಿದರು.