ಅಸೌಖ್ಯದಿಂದ ಬಳಲುತ್ತಿದ್ದ ಅಲೆಕ್ಕಾಡಿ ಶಾಲಾ ವಿದ್ಯಾರ್ಥಿನಿ ಮೃತ್ಯು

0

ಅಸೌಖ್ಯದಿಂದ ಬಳಲುತ್ತಿದ್ ಮುರುಳ್ಯ -ಅಲೆಕ್ಕಾಡಿ ಶಾಲಾ 3ನೇ ತರಗತಿ ವಿದ್ಯಾರ್ಥಿನಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಆ.12ರಂದು ನಿಧನಳಾದಳು.

ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಳಿಕ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಕೋಮ ಸ್ಥಿತಿಯಲ್ಲಿ ಚಿಂತಾಜನಕವಿದ್ದ ಆಕೆ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರೆಳೆದಳು.

ಅಲೆಕ್ಕಾಡಿ ಶಿಕ್ಷಕರು, ಸಂಘ ಸಂಸ್ಥೆಗಳು, ಊರಿನವರು,ಪರ ಊರಿನಲ್ಲಿದ್ದ ಊರಿನವರು ಧನ ಸಹಾಯ ನೀಡಿ ಆಸ್ಪತ್ರೆಯ ವೆಚ್ಚವನ್ನು ಭರಿಸಿದ್ದರು.

ಮೃತಳು ತಂದೆ ತಾರಾನಾಥ, ತಾಯಿ ಶಶಿಕಲಾ ಮತ್ತು ಸಹೋದರಿ 6ನೇ ತರಗತಿಯ ಅಮೃತಾ ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.