ಸುಳ್ಯದ ಅಡ್ಕಾರು ಕಾಂಪ್ಲೆಕ್ಸ್ ನಲ್ಲಿ ಪಾತಿಕಲ್ಲು ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಲೋಕಾರ್ಪಣೆ

0

ಮಂಡೆಕೋಲು ಗ್ರಾಮದ ಪಾತಿಕಲ್ಲು ಹರಿಶ್ಚಂದ್ರ ಹಾಗೂ ಶ್ರೀಮತಿ ವಿನುತಾ ಪಾತಿಕಲ್ಲುರವರ ಪುತ್ರ ಇಂಜಿನಿಯರ್ ಮಿಲನ್ ಪಾತಿಕಲ್ಲು ಮಾಲಕತ್ವದ ಪಾತಿಕಲ್ಲು ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಸಂಸ್ಥೆಯ ಲೋಕಾರ್ಪಣೆಯು ಆ.22ರಂದು ಅಂಬಟೆಡ್ಕದ ಅಡ್ಕಾರ್ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.

ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ.ಚಿದಾನಂದ ಲೋಕಾರ್ಪಣೆಗೈದರು.

ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಅಡ್ಪಂಗಾಯ ಅಯ್ಯಪ್ಫ ಸ್ವಾಮಿ ಮಂದಿರದ ಧರ್ಮದರ್ಶಿ ಶಿವಪ್ರಕಾಶ್ ಅಡ್ಪಂಗಾಯ, ಕರ್ನಾಟಕ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಸುಳ್ಯ ತಾಲೂಕು ಗೌಡರ ಯುವ ಸೇವಾ ಸಂಘದ ಅಧ್ಯಕ್ಷ ಪಿ.ಎಸ್.ಗಂಗಾಧರ್, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಶ್ರೀಮತಿ ಯೋಗೀತಾ ಗೋಪಿನಾಥ್, ಅಡ್ಕಾರು ಕಾಂಪ್ಲೆಕ್ಸ್ ಮಾಲಕ ದಿನೇಶ್ ಅಡ್ಕಾರ್ ಮುಖ್ಯ ಅತಿಥಿಗಳಾಗಿದ್ದರು.

ಸಮಾರಂಭದಲ್ಲಿ ಪಾತಿಕಲ್ಲು ಬಿಲ್ಡರ್ಸ್ ಆಂಡ್ ಡೆವಲಪರ್ಸ್ ಸಂಸ್ಥೆಯ ಉದ್ಯೋಗಿಗಳಿಗೆ ಸೇಫ್ಟಿ ಕಿಟ್ ವಿತರಣೆ ನಡೆಯಿತು.

ಸವಿತಾ ಸಂದೇಶ್ ಪ್ರಾರ್ಥಿಸಿದರು. ಮಿಲನ್ ಪಾತಿಕಲ್ಲು ಸ್ವಾಗತಿಸಿದರು. ವಿಜಯಕುಮಾರ್ ಉಬರಡ್ಕ ಕಾರ್ಯಕ್ರಮ ನಿರೂಪಿಸಿದರು. ವಿನುತಾ ಪಾತಿಕಲ್ಲು ವಂದಿಸಿದರು.