ಸುಳ್ಯ ಸಿಎ ಬ್ಯಾಂಕ್ ಗೆ ಸಹಕಾರ ಸಂಘಗಳ ಸಹಕಾರ ಇಲಾಖೆಯ ಅಪರ ನಿಬಂಧಕರ ಭೇಟಿ

0

ಸುಳ್ಯ ಸಿ.ಎ. ಬ್ಯಾಂಕ್ ಗೆ ಸಹಕಾರ ಸಂಘಗಳ ಬೆಂಗಳೂರು ಸಹಕಾರ ಇಲಾಖೆಯ ಅಪರ ನಿಬಂಧಕ ( cerdit) ರಾಗಿರುವ ಬಾಲಶೇಖರ್ ರವರು ಆ.23ರಂದು ಭೇಟಿ ನೀಡಿ ಪರೀವೀಕ್ಷಣೆ ನಡೆಸಿದರು.

ಸಂಘದ ಉಪಾಧ್ಯಕ್ಷರಾದ ಚಂದ್ರಶೇಖರ್, ಬಾಲಶೇಖರ್ ರನ್ನು ಹೂಗುಚ್ಚ ನೀಡಿ ಸ್ವಾಗತಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್ ಎಸ್ ಪಿ ಸಂಘದ ಕಾರ್ಯವೈಖರಿಯ ಬಗ್ಗೆ ಮಾಹಿತಿ ನೀಡಿದರು.

ರಮೇಶ್ ಕೆ.ಎನ್, ಸಹಕಾರ ಸಂಘಗಳ ಉಪನಿಬಂಧಕರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ರಘು, ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಪುತ್ತೂರು ಉಪವಿಭಾಗ, ಪುತ್ತೂರು ಇವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.