ಹಳೆಗೇಟು : ಕಾರು ಪಲ್ಟಿ- ಅಪಾಯದಿಂದ ಪಾರು

0

ಗುತ್ತಿಗೆದಾರ, ಗಾಂಧಿನಗರ ಕೆಪಿಎಸ್ ಕಾರ್ಯಧ್ಯಕ್ಷ ಚಿದಾನಂದ ಕುತ್ಪಾಜೆ ಯವರು ಚಲಿಸುತ್ತಿದ್ದ ಕಾರು ಹಳಗೇಟಿನ ಓಡಬಾಯಿ ಬಳಿ ಅಪಘಾತವಾದ ಘಟನೆ ಇದೀಗ ನಡೆದಿದೆ.

ಸುಳ್ಯ ದಿಂದ ದುಗಲಡ್ಕ ಕಡೆಗೆ ಹೋಗುತ್ತಿದ್ದಾಗ ಓಡಬಾಯಿಯ ಪಟ್ರುಕೋಡಿ ಬೇಕರಿ ಬಳಿ ಈ ಘಟನೆ ಸಂಭವಿಸಿದ್ದು, ಕಾರು ಜಖಂಗೊಂಡಿದ್ದು, ಚಿದಾನಂದ ಕುತ್ಪಾಜೆಯವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.