ಬೊಮ್ಮಾರು : ಊರ ಕಲಾವಿದರಿಂದ ಮಾಗಧವಧೆ ಯಕ್ಷಗಾನ ತಾಳಮದ್ದಳೆ

0

ಮರ್ಕಂಜ ಗ್ರಾಮದ ಬೊಮ್ಮಾರು ಶ್ರೀ ಮೂವರ್ ದೈವಸ್ಥಾನದ ಆವರಣದಲ್ಲಿ ಕೃಷ್ಣಾಷ್ಟಮಿ ಪ್ರಯುಕ್ತ ಊರ ಕಲಾವಿದರಿಂದ ಮಾಗದವಧೆ ಯಕ್ಷಗಾನ ತಾಳ ಮದ್ದಳೆ ನಡೆಯಿತು.
ಹಿಮ್ಮೇಳದಲ್ಲಿ ದಾಮೋದರ ಪಾಟಾಳಿ ಮಿತ್ತಡ್ಕ, ಶ್ಯಾಮಪ್ರಸಾದ್ ಗುಂಡಿ, ಬಾಲಕೃಷ್ಣ ಬೊಮ್ಮಾರು ಮತ್ತು ಪ್ರಣಮ್ ರೆಂಜಾಳ ಹಾಗೂ ಮುಮ್ಮೇಳದಲ್ಲಿ ರಾಮಕೃಷ್ಣರಾವ್ ರೆಂಜಾಳ, ನಾರಾಯಣಗೌಡ ಪಾನತ್ತಿಲ, ಐತಪ್ಪ ಗೌಡ ಬೊಮ್ಮಾರ್ ಮತ್ತು ಜಯಪ್ರಕಾಶ್ ಗುಂಡಿ ಇವರು ಭಾಗವಹಿಸಿದ್ದರು.
ವಿಶೇಷವಾಗಿ ಯಕ್ಷಗಾನದ ಸ್ತುತಿಯನ್ನು ಪುಟಾಣಿಗಳಾದ ಮಾ.ಆಶಿಶ್ ಚಳ್ಳ, ಕು.ಚಿನ್ಮಯಿ ಬೊಮ್ಮಾರು ಮತ್ತು ಮಾ.ಭವಿತ್ ಬೊಮ್ಮಾರು ನಡೆಸಿಕೊಟ್ಟರು.