ಸೆ. 22 ಬೆಳ್ಳಾರೆಯಲ್ಲಿ ಚೂಡಾಮಣಿ – ರುಕ್ಮಿಣಿ ಕಲ್ಯಾಣ ಯಕ್ಷಗಾನ ಪ್ರದರ್ಶನ

0

ಯಕ್ಷಾಭಿಮಾನಿ ಬಳಗ ಬೆಳ್ಳಾರೆ ಅರ್ಪಿಸುವ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿ ನಿಡ್ಲೆ, ಧರ್ಮಸ್ಥಳ ಇವರಿಂದ ಮಳೆಗಾಲದ ಮಹೋನ್ನತ ಯಕ್ಷಗಾನ ಬಯಲಾಟ ಚೂಡಾಮಣಿ – ರುಕ್ಮಿಣಿ ಕಲ್ಯಾಣ ಸೆ. 22ರಂದು ಸಂಜೆ 7ರಿಂದ ಬೆಳ್ಳಾರೆಯ ಮಾವಂಜಿ ಕಾಂಪ್ಲೆಕ್ಸ್ ವಠಾರದಲ್ಲಿ ನಡೆಯಲಿದೆ.

ಹಮ್ಮೇಳದಲ್ಲಿ ಭಾಗವತರಾಗಿ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಸುದೀಶ್ ಪಾಣಾಜೆ, ಚೆಂಡೆ ಮದ್ದಳೆಯಲ್ಲಿ ಶ್ರೀಧರ ಪಡ್ರೆ, ಚಂದ್ರಶೇಖರ ಸರಪಾಡಿ, ಹಾಸ್ಯದಲ್ಲಿ ಮುವ್ವಾರು ಬಾಲಕೃಷ್ಣ ಮಣಿಯಾಣಿ, ಸ್ತ್ರೀ ವೇಶದಲ್ಲಿ ಮುರಳಿಧರ ಕನ್ನಡಿಗಟ್ಟೆ, ಶರತ್ ಶೆಟ್ಟಿ ತೀರ್ಥಹಳ್ಳಿ ಹಾಗೂ ಪ್ರಧಾನ ಭೂಮಿಕೆಯಲ್ಲಿ ಗಣೇಶ್ ಚಂದ್ರಮಂಡಲ, ಪದ್ಮನಾಭ ಕನ್ನಡಿಗಟ್ಟೆ, ಹರೀಶ್ ಮಣ್ಣಾಪು, ಅರಳ ಗಣೇಶ್ ಶೆಟ್ಟಿ, ಪ್ರಸಾದ್ ಸವಣೂರು, ಹರಿಶ್ಚಂದ್ರ ಆಚಾರ್ಯ ಚಾರ್ಮಾಡಿ, ನವೀನ್ ಶೆಟ್ಟಿ ಮುಂಡಾಜೆ, ಅಕ್ಷಯ ಭಟ್ ಮೂಡುಬಿದರೆ, ಗೌತಮ್ ಶೆಟ್ಟಿ ಬೆಳ್ಳಾರೆ, ಸತೀಶ್ ನೀರ್ಕರೆ, ಅಕ್ಷಯ್ ಮಿಜಾರು ಮತ್ತು ಅತಿಥಿ ಭಾಗವತರಾಗಿ ಭರತ್ ಶೆಟ್ಟಿ ಸಿದ್ಧಕಟ್ಟೆ ಭಾಗವಹಿಸಲಿದ್ದಾರೆ ಎಂದು ಕಾರ್ಯಕ್ರಮದ ಸಾಯೋಜಕರಾದ ವಾಸುದೇವ ರೈ ಬೆಳ್ಳಾರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.