ನಿವೃತ್ತ ಗ್ರಾಮ ಲೆಕ್ಕಾಧಿಕಾರಿ , ಪ್ರಭಾರ ಕಂದಾಯ ನಿರೀಕ್ಷಕ ದಿ.ಶಿವಪ್ಪ ಗೌಡ ಪಳಂಗಾಯ ಅವರಿಗೆ ಶ್ರದ್ಧಾಂಜಲಿ

0

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ, ಪ್ರಭಾರ ಕಂದಾಯ ನಿರೀಕ್ಷಕ ಏನೆಕಲ್ಲು ಗ್ರಾಮದ ಶಿವಪ್ಪ ಗೌಡ ಪಳಂಗಾಯ ರವರು ಸೆ.30 ರಂದು ನಿಧನರಾಗಿದ್ದು ಅವರಿಗೆ ಶ್ರದ್ಧಾಂಜಲಿ ಸಭೆ, ವೈಕುಂಠ ಸಮಾರಾಧನೆ ಪಡ್ಪಿನಂಗಡಿ ನಡ್ಕ ಶಿವಗೌರಿ ಕಲಾ ಮಂದಿರದಲ್ಲಿ ನಡೆಯಿತು.

ಡಾ.ಶಿವಕುಮಾರ್ ಹೊಸೋಳಿಕೆ ನುಡಿ ನಮನ ಸಲ್ಲಿಸಿ “ಉತ್ತಮ ಅನುಭವಿ ಅಧಿಕಾರಿಯಾಗಿ, ತಮ್ಮ ಅಧಿಕಾರ ಅವಧಿಯಲ್ಲಿ ಉತ್ತಮ ಸೇವೆ ಸಲ್ಲಿಸಿ ಜನರ ಅತ್ಯಂತ ಪ್ರೀತಿ ಗಳಿಸಿದವರು. ನಮಗೆಲ್ಲರಿಗೂ ಮಾರ್ಗದರ್ಶಕರಾಗಿ ಸಾರ್ಥಕ ಜೀವನ ನಡೆಸಿದ್ದಾರೆ”. ಎಂದು ಹೇಳಿದರು.


.
ಹಿರಿಯ ಸಹಕಾರಿ ಧುರೀಣ ಜಾಕೆ ಮಾಧವ ನುಡಿ ನಮನ ಸಲ್ಲಿಸಿ.ಶಿವಪ್ಪ ಗೌಡರ ಉತ್ತಮ ಸುಸಂಸ್ಕೃತರಾಗಿ ಬಾಳಿದ್ದಾರೆ. ಅದನ್ನು ಅವರ ಮನೆಯವರು ಮೈಗೂಡಿಸಿ ಸೇವೆ ಸಲ್ಲಿಸಿಸುತ್ತಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲರೂ ಪಾಲಿಸುವ ಎಂದು ಹೇಳಿದರು.


ಮೃತರ ಪತ್ನಿ ಶ್ರೀಮತಿ ಕಮಲ, ಪುತ್ರ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಿಧರ್ ಪಳಂಗಾಯ, ಪುತ್ರಿ ಶ್ರೀಮತಿ ಜಲಜಾಕ್ಷಿ ಹರಿಪ್ರಕಾಶ್ ಬೈಲಾಡಿ, ಹಿರಿಯರಾದ ನಿವೃತ್ತ ಪೋಸ್ಟ್ ಮಾಸ್ಟರ್ ಸದಾಶಿವ ಪಳಂಗಾಯ, ಸೊಸೆ, ಅಳಿಯಂದಿರು, ಮೊಮ್ಮಕ್ಕಳು ಕುಟುಂಬಸ್ಥರು, ಬಂಧುಮಿತ್ರರು ಉಪಸ್ಥಿತರಿದ್ದು ಮೃತರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು.. .
ಕಾರ್ಯಕ್ರಮದಲ್ಲಿ ಚಂದ್ರಶೇಖರ ಇಟ್ಯಡ್ಕ ನಿರೂಪಿಸಿದರು ಮತ್ತು ಸ್ವಾಗತಿಸಿದರು. ಶಶಿಧರ್ ಪಳಂಗಾಯ ವಂದಿಸಿದರು.