ಅಗಲಿದ ದಿವಾಕರ ಮುಂಡಾಜೆಯವರಿಗೆ ಜೆಡಿಎಸ್ ಶ್ರದ್ಧಾಂಜಲಿ ಸಭೆ

0

ಜೆಡಿಎಸ್ ನ ಮುಖಂಡರಾಗಿ ಗುರುತಿಸಿಕೊಂಡಿದ್ದ , ಹರಿಹರ ಪಲ್ಲತ್ತಡ್ಕ ಗ್ರಾಮ ಪಂಚಾಯತ್ ಸದಸ್ಯರಾದ ದಿವಾಕರ ಮುಂಡಾಜೆಯವರು ಇತ್ತೀಚಿಗೆ ಅಗಲಿದ್ದು ಅವರಿಗೆ ಪಕ್ಷದ ಕಚೇರಿಯಲ್ಲಿ ಶ್ರದ್ಧಾಂಜಲಿ ಸಭೆಯು ಅ 22 ರಂದು ನಡೆಯಿತು.

ಜೆಡಿಎಸ್ ಪಕ್ಷದ ತಾಲೂಕು ಘಟಕದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿಯವರು ದೀಪ ಬೆಳಗಿಸಿ ನುಡಿ ನಮನ ಸಲ್ಲಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಕೋರಿ ಮೌನ ಪ್ರಾರ್ಥನೆ ಮಾಡಲಾಯಿತು.

ಈ ಸಂದರ್ಭದಲ್ಲಿ ಪಕ್ಷದ ಉಪಾಧ್ಯಕ್ಷರುಗಳಾದ ರೋಹನ್ ಪೀಟರ್, ದೇವರಾಮ ಬಾಳೆಕಜೆ, ಮಹಿಳಾ ಘಟಕದ ಅಧ್ಯಕ್ಷೆ ಮಹಾಲಕ್ಷ್ಮಿ ಕೊರಂಬಡ್ಕ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾದ ಹಸೖನಾರ್, ಪ.ಜಾತಿ ಹಾಗೂ ಪ.ಪಂ. ಘಟಕದ ಅಧ್ಯಕ್ಷರಾದ ಎಂ.ಬಿ. ಚೋಮ, ರಾಮಚಂದ್ರಬಳ್ಳಡ್ಕ ಮತ್ತಿತರರು ಉಪಸ್ಥಿರಿದ್ದರು. ಪಕ್ಷದ ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ ರವರು ಸ್ವಾಗತಿಸಿ ವಂದಿಸಿದರು.