ಮಡಪ್ಪಾಡಿ ಯುವಕ ಮಂಡಲ ಹಾಗೂ ಶ್ರೀ ರಾಮ ಭಜನಾ ಮಂಡಳಿ ಮಡಪ್ಪಾಡಿ ಇದರ ವತಿಯಿಂದ ಮಡಪ್ಪಾಡಿಯ ಕುಶಾಲಪ್ಪ ಪಾರೆಮಜಲು ಎಂಬವರಿಗೆ ಗ್ಯಾಸ್ ಸ್ಟವ್ ಹಾಗೂ ಸಿಲಿಂಡರ್ ನ್ನು ಕೊಡುಗೆಯಾಗಿ ನೀಡಿದರು.
ಈ ಸಂದರ್ಭದಲ್ಲಿ ಮಡಪ್ಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವಿನಯ ಕುಮಾರ್ ಮುಳುಗಾಡು, ಉಪಾಧ್ಯಕ್ಷ ಸಚಿನ್ ಬಳ್ಳಡ್ಕ, ನಿರ್ದೇಶಕ ಕರುಣಾಕರ ಪಾರೆಪ್ಪಾಡಿ, ಯುವಜನ ಸಂಯುಕ್ತ ಮಂಡಳಿ ನಿರ್ದೇಶಕ ಲೋಹಿತ್ ಬಾಳಿಕಳ, ಯುವಕ ಮಂಡಲದ ಅಧ್ಯಕ್ಷ ಕಿರಣ್ ಕುಮಾರ್ ಶೀರಡ್ಕ, ಕಾರ್ಯದರ್ಶಿ ರಕ್ಷಿತ್ ಶೀರಡ್ಕ, ಭಜನಾ ಮಂಡಳಿ ಅಧ್ಯಕ್ಷ ವಿನ್ಯಾಸ್ ಪಾರೆಮಜಲು, ಕಾರ್ಯದರ್ಶಿ ಪ್ರೇಕ್ಷಿತ್ ಬೊಮ್ಮೆಟ್ಟಿ, ಸದಸ್ಯರಾದ ಚಂದ್ರಶೇಖರ ಗೋಳ್ಯಾಡಿ, ಧನ್ಯ ಕುಮಾರ್ ದೇರುಮಜಲು, ರಂಜಿತ್ ಬೊಮೆಟ್ಟಿ, ಯಕ್ಷಿತ್ ಬೊಮ್ಮೆಟ್ಟಿ, ಕುಶನ್ ಅಂಬೆಕಲ್ಲು, ರಂಜಿತ್ ಅಂಬೆಕಲ್ಲು ಮತ್ತಿತರರು ಉಪಸ್ಥಿತರಿದ್ದರು.