ಅಜ್ಜಾವರ, ಮಂಡೆಕೋಲು ಕೃಷಿಕರ ತೋಟಕ್ಕೂ ನುಗ್ಗಿದ ನೀರು
ಸುಳ್ಯದ ಜೀವ ನದಿಯಾಗಿರುವ ಪಯಸ್ವಿನಿಯಲ್ಲಿ ಇಂದು ಮುಂಜಾನೆ ನೀರಿನ ಹರಿವು ಹೆಚ್ಚಾಗ ತೊಡಗಿದ್ದು ಇದರಿಂದಾಗಿ ಅಜ್ಜಾವರ, ಮಂಡೆಕೋಲು ಗ್ರಾಮಗಳ ಕೃಷಿಕರ ತೋಟಕ್ಕೂ ನೀರು ನುಗ್ಗಿದೆ.
ನದಿ ಸಮೀಪವಿರುವ ತೋಟಗಳಿಗೆ ನೀರು ನುಗ್ಗಿದೆ. ಅಜ್ಜಾವರ ಗ್ರಾ.ಪಂ. ಸದಸ್ಯ ವಿಶ್ವನಾಥ ಮುಳ್ಯಮಠರ ತೋಟದಲ್ಲಿ ನೀರು ನಿಂತಿದೆ. ಮಂಡೆಕೋಲು ಗ್ರಾಮದಲ್ಲಿಯೂ ಇದೇ ದೃಶ್ಯ ಕಂಡು ಬರುತ್ತಿದೆ.