ರೋಟರಿ ಆಂಗ್ಲಮಾಧ್ಯಮ ವಿದ್ಯಾ ಸಂಸ್ಥೆಯಲ್ಲಿ ನಿವೃತ್ತ ಮುಖ್ಯ ಶಿಕ್ಷಕ ಅಚ್ಯುತ ಅಟ್ಲೂರ್ ರವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ

0

ರೋಟರಿ ವಿದ್ಯಾಸಂಸ್ಥೆಯಲ್ಲಿ ಇತ್ತೀಚೆಗೆ ನಿವೃತ್ತರಾದ ಮುಖ್ಯ ಶಿಕ್ಷಕ, ಶಿಕ್ಷಕ ರತ್ನ ಪುರಸ್ಕೃತ ಶ್ರೀ ಅಚ್ಯುತ ಅಟ್ಲೂರ್ ರವರಿಗೆ ಬೀಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಆ. 20ರಂದು ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ರೋಟರಿ ಸುಳ್ಯದ ಅಧ್ಯಕ್ಷ ಚಂದ್ರಶೇಖರ್ ಪೇರಾಲ್ ವಹಿಸಿದ್ದರು. ಸಂಚಾಲಕರಾದ ಗಿರಿಜಾಶಂಕರ್ ತುದಿ ಯಡ್ಕರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

 

ನಂತರ ವಿದ್ಯಾರ್ಥಿಗಳಾದ ಅಹನ್ ಕಿರಣ್, ರಕ್ಷಾ. ಕೆ.ಜಿ., ಪೂರ್ವಿಕ, ಶರಣ್ಯ, ಮನ್ವಿತಾ. ಎಸ್., ಮಿಥಾಲಿ ಕೊಯ್ನಾಡು , ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಕೆ.ಎಸ್. ಶಿಕ್ಷಕರಾದ ರೇವತಿ ಎನ್, ನಳಿನಿ. ಡಿ. ರಶ್ಮಿ ಎಸ್.ಎನ್, ಸವಿತಾ. ಜಿ.ಡಿ , ನಳಿನಾಕ್ಷಿ ಕಲ್ಮಡ್ಕ, ಉಪನ್ಯಾಸಕಿ ಜಯಮಾಲಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು . ಕಲಾ ಶಿಕ್ಷಕ ಪದ್ಮನಾಭ ಕೊಯ್ನಾಡು ಸ್ವರಚಿತ ಕವನದ ವಾಚನ ಮಾಡಿದರು.

ಆಡಳಿತ ಮಂಡಳಿ ಸದಸ್ಯರಾದ  ಬೆಳ್ಯಪ್ಪ ಗೌಡ, ದಯಾನಂದ ಆಳ್ವ,ಪೂರ್ವಾಧ್ಯಕ್ಷರಾದ  ಮೀನಾಕ್ಷಿ. ಗೌಡ, ಪೂರ್ವ ಸಂಚಾಲಕರಾದ ಗಣೇಶ್ ಭಟ್,  ಜಿತೇಂದ್ರ ಎನ್. ಎ, ಶುಭ ಹಾರೈಸಿದರು.

ಆಡಳಿತ ಮಂಡಳಿ ಸದಸ್ಯರಾದ ಬೆಳ್ಯಪ್ಪ ಗೌಡ, ಮಹಾಲಕ್ಷ್ಮಿ ಕೊರಂಬಡ್ಕ ಶುಭ ಹಾರೈಸಿದರು.

ನಂತರ ಮೊದಲು ಆಡಳಿತ ಮಂಡಳಿಯ ವತಿಯಿಂದ ಅಚ್ಯುತ ಅಟ್ಲೂರ್ ಹಾಗೂ ಧರ್ಮಪತ್ನಿ ಶ್ರೀಮತಿ ಜಯಂತಿ ದಂಪತಿಗಳನ್ನು ಗೌರವಿಸಿ, ಸನ್ಮಾನಿಸಲಾಯಿತು .  ನಂತರ ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳ ವತಿಯಿಂದ, ಸಿಬ್ಬಂದಿ ವರ್ಗದವರ ವತಿಯಿಂದ, ಪ್ರೌಢಶಾಲಾ ಸಿಬ್ಬಂದಿ ವರ್ಗದವರ ವತಿಯಿಂದ , ಪದವಿ ಪೂರ್ವ ಕಾಲೇಜು ವಿಭಾಗದಿಂದ, ಗೌರವಿಸಲಾಯಿತು. ಶಿಕ್ಷಕಿ ಶ್ರೀಮತಿ ಸರೋಜ ಎಂ.ಟಿ. ಸನ್ಮಾನ ಪತ್ರ ವಾಚಿಸಿದರು. ಅಚ್ಯುತ ಅಟ್ಲೂರ್ ರವರು ತಮ್ಮ 24 ವರ್ಷಗಳ ಅನುಭವ ಗಳನ್ನು ಹಂಚಿಕೊಂಡರು.
ವಿದ್ಯಾರ್ಥಿಗಳಾದ ವಂದಿತಾ, ಗಾನವಿ, ಸ್ವಾತಿ , ಪೂರ್ವಿಕಾ ಪ್ರಾರ್ಥಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ವೀಣಾ ಶೇಡಿಕಜೆ ಸ್ವಾಗತಿಸಿ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಶೋಭಾ ಬೊಮ್ಮೆಟ್ಟಿ, ವಂದಿಸಿದರು. ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.ವಿದ್ಯಾಸಂಸ್ಥೆಯ ಎಲ್ಲಾ ಸಿಬ್ಬಂದಿ ವರ್ಗದವರು ಸಹಕರಿಸಿದರು.