ವಿನೋಬನಗರ: ವಿವೇಕಾನಂದ ವಿದ್ಯಾಸಂಸ್ಥೆಗೆ ಕ್ರೀಡಾಸಮವಸ್ತ್ರ ಹಸ್ತಾಂತರ

0

 

ಓಂ ಅಡ್ಕಾರು ಕ್ರಿಕೆಟರ್ಸ್ ಹಾಗೂ ಪೇರಾಲು – ಅಂಬ್ರೋಟಿ ಶ್ರೀರಾಮ್ ಫ್ರೆಂಡ್ಸ್ ವತಿಯಿಂದ ಕೊಡುಗೆ

ಜಾಲ್ಸೂರು ಗ್ರಾಮದ ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಗೆ ಓಂ ಅಡ್ಕಾರು ಕ್ರಿಕೆಟರ್ಸ್ ಹಾಗೂ ಪೇರಾಲು ಅಂಬ್ರೋಟಿ ಶ್ರೀರಾಮ್ ಫ್ರೆಂಡ್ಸ್ ವತಿಯಿಂದ ಕ್ರೀಡಾ ಸಮವಸ್ತ್ರವನ್ನು ಆ.25ರಂದು ಕೊಡುಗೆಯಾಗಿ ನೀಡಲಾಯಿತು.
ವಿದ್ಯಾಸಂಸ್ಥೆಯ ಪ್ರೌಢಶಾಲಾ ವಿಭಾಗದ ತಾಲೂಕು ಮಟ್ಟದ ವಾಲಿಬಾಲ್ ತಂಡಕ್ಕೆ ಓಂ ಅಡ್ಕಾರ್ ಕ್ರಿಕೆಟರ್ಸ್ ತಂಡದವರಿಂದ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಿದರು.

ಪ್ರಾಥಮಿಕ ವಿಭಾಗದ ಬಾಲಕ ಹಾಗೂ ಬಾಲಕಿಯರ ತಾಲೂಕು ಮಟ್ಟದ ಕಬಡ್ಡಿ ತಂಡಕ್ಕೆ ಪೇರಾಲು ಅಂಬ್ರೋಟಿ ಶ್ರೀರಾಮ್ ಫ್ರೆಂಡ್ಸ್ ವತಿಯಿಂದ ಕ್ರೀಡಾ ಸಮವಸ್ತ್ರವನ್ನು ಕೊಡುಗೆಯಾಗಿ ನೀಡಲಾಯಿತು.


ಈ ಸಂದರ್ಭದಲ್ಲಿ ವಿದ್ಯಾಸಂಸ್ಥೆಯ ಸಂಚಾಲಕ ಸುದಾಕರ ಕಾಮತ್‌ ,ಅಡ್ಕಾರು ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಮೊಕ್ತೇಸರ ಗುರುರಾಜ್ ಭಟ್ ಅಡ್ಕಾರು, ಪ್ರೌಡ ಶಾಲಾ ಮುಖ್ಯೋಪಾಧ್ಯಾಯ ಗಿರೀಶ್ ಕುಮಾರ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಯಪ್ರಸಾದ್ ಕಾರಿಂಜ, ಓಂ ಅಡ್ಕಾರು ಕ್ರಿಕೆಟ್ ತಂಡದ ಸದಸ್ಯರುಗಳಾದ ಯತೀಂದ್ರ ಅಡ್ಕಾರುಬೈಲು, ಶ್ರೀಕಾಂತ್ ಅಡ್ಕಾರುಬೈಲು ,ರಾಜೇಶ್ ಅಡ್ಕಾರುಬೈಲು, ಶ್ರೀರಾಮ್ ಪ್ರೆಂಡ್ಸ್ ಸದಸ್ಯರುಗಳಾದ ಅಜಿತ್ ಬನ್ನೂರ್, ತಾರನಾಥ ಕೊಡೆಂಚಿಕಾರ್, ರಂಜನ್ ಸೊರಂಜ,ಹರಿಪ್ರಸಾದ್ ಪೇರಾಲು ಉಪಸ್ಥಿತರಿದ್ದರು.