ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮಹಾಸಭೆ

0

 

ತೊಡಿಕಾನ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಮಹಾಸಭೆ ಆ. 26 ರಂದು ಸಂಘದ ಸಭಾಭವನದಲ್ಲಿ ನಡೆಯಿತು .
ಸಂಘದ ಅಧ್ಯಕ್ಷೆ ಪ್ರೇಮ ವಸಂತ ಭಟ್ ಮಹಾಸಭೆಯ ಅಧ್ಯಕ್ಷತೆ ವಹಿಸಿ , ಸಂಘದ ವತಿಯಿಂದ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ವಿವರಿಸಿ ಮುಂದಿನ ಯೋಜನೆಗಳ ಕುರಿತು ವಿವರಿಸಿದರು.

 

ಮುಖ್ಯ ಅತಿಥಿಗಳಾಗಿ ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಭಾಗವಹಿಸಿ ಸಂಘದ ಅಭಿವೃದ್ಧಿಗೆ ಕೈಗೊಳ್ಳಬಹುದಾದ ಯೋಜನೆಗಳ ಕುರಿತು ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ಜಲಜಾಕ್ಷಿ ವಾರ್ಷಿಕ ವರಧಿ ಹಾಗೂ ಲೆಕ್ಕಪತ್ರ ಮಂಡಿಸಿದರು. ಕೆಎಂಎಫ್ ವಿಸ್ತರಣಾಧಿಕಾರಿ ನಿರಂಜನ್ , ಸಹಾಯಕ ವ್ಯವಸ್ಥಾಪಕರಾದ ಡಾ. ಪೂಜಾ ಜಿ.ಎಸ್ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷರಾದ ಚಂದ್ರಕಲಾ ಕುತ್ತಮೊಟ್ಟೆ , ನಿರ್ದೇಶಕರುಗಳಾದ ಸಾವಿತ್ರಿ ಭಟ್ , ರಾಧಮ್ಮ ಪಡ್ಪು , ಚಿನ್ನಮ್ಮ ದೊಡ್ಡಡ್ಕ , ಹೇಮಲತಾ ಕೊಳಲುಮೂಲೆ , ಸರೋಜಾ ಕೋಣಗುಂಡಿ , ವಿನೋದಕುಮಾರಿ ಮಡ್ತಿಲ , ವಸಂತಿ ಬಾಳೆಕಜೆ ವೇದಿಕೆಯಲ್ಲಿದ್ದರು. ಸೌಮ್ಯ ಭಟ್ ಸ್ವಾಗತಿಸಿ , ಡಾ. ಪೂಜಾ ಪ್ರಾರ್ಥಿಸಿದರು. ಹೇಮಲತಾ ಕೊಳಲುಮೂಲೆ ವಂದಿಸಿದರು. ಕಾರ್ಯದರ್ಶಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಲೇಖಾವತಿ , ಧನಲಕ್ಷ್ಮಿ , ಯೋಗೀಶ್ವರಿ ಅಡ್ಯಡ್ಕ ಸಹಕರಿಸಿದರು.