ಅನಾರೋಗ್ಯ ಪೀಡಿತ ಬಾಲಕಿ ಸಮೀಕ್ಷಾಳಿಗೆ ಉಬರಡ್ಕ ಹಿಂದೂ ಜಾಗರಣ ವೇದಿಕೆಯಿಂದ ಅಕ್ಕಿ ಮತ್ತು ಧನಸಹಾಯ ವಿತರಣೆ

0

ಸುಳ್ಯದಲ್ಲಿ ನಡೆದ ವಿಶ್ವ ಹಿಂದೂ ಪರಿಷದ್ ಮತ್ತು ಮೊಸರು ಕುಡಿಕೆ ಉತ್ಸವ ಸಮಿತಿಯ ವತಿಯಿಂದ ನಡೆದ 9ನೇ ವರ್ಷದ ಅಟ್ಟಿ ಮಡಿಕೆ ಒಡೆಯುವ ಸ್ಪರ್ದೆಯಲ್ಲಿ ಹಿಂದು ಜಾಗರಣ ವೇದಿಕೆ ಉಬರಡ್ಕ ತಂಡವು ಪ್ರಥಮ ಸ್ಥಾನ ಪಡೆದು ಅದರಲ್ಲಿ ಬಂದ 10,000 /- ಬಹುಮಾನದ ಮೊತ್ತದೊಂದಿಗೆ ಒಟ್ಟು 21,500 /- ರೂ ಧನ ಸಹಾಯ ಹಾಗೂ 50 ಕೆ.ಜಿ ಅಕ್ಕಿಯನ್ನು ಅನಾರೋಗ್ಯ ಪೀಡಿತ ಗುತ್ತಿಗಾರು ವಿಶ್ವನಾಥ ಮತ್ತು ಹೇಮಾವತಿ ದಂಪತಿ ಪುತ್ರಿ ಸಮೀಕ್ಷಾಳ ಮನೆಗೆ ಉಬರಡ್ಕ ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರು ತೆರಳಿ ನೀಡಿದರು.