ಪೆರಾಜೆ ಶಾಸ್ತಾವು ದೇವಸ್ಥಾನದ ವತಿಯಿಂದ ಡಾ| ರೇಣುಕಾಪ್ರಸಾದ್ ಕೆ.ವಿ.ಯವರಿಗೆ ಗೌರವ

0

 

 

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ನಡೆದ ಐದನೇ ಸೋಣ ಶನಿವಾರದ ಉಪಾಹಾರದ ದಾನಿಗಳಾಗಿ ಸಹಕಾರ ನೀಡಿದ ರಾಜ್ಯ ಒಕ್ಕಲಿಗರ ಸಂಘದ ಉಪಾಧ್ಯಕ್ಷ ಡಾ. ರೇಣುಕಾಪ್ರಸಾದ್ ಕೆ.ವಿ.ಯವರನ್ನು ದೇವಸ್ಥಾನದ ವತಿಯಿಂದ ಗೌರವಿಸಲಾಯಿತು.
ಸೆ.೧೭ರಂದು ಕ್ಷೇತ್ರದಲ್ಲಿ ವಿಶೇಷ ಶನಿಪೂಜೆ ಹಾಗೂ ಶ್ರಾವಣ ಶನಿವಾರ ವೃತಾಚರಣೆ ನಡೆಯಿತು. ನೂರಾರು ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.


ಅನ್ನಪೂರ್ಣೇಶ್ವರಿ ಭಜನಾ ಸಂಘ ಮತ್ತು ಯುವ ಕೋಟೆ ಪುತ್ಯ ಪೆರಾಜೆ ಇದರ ಸದಸ್ಯರ ಶ್ರಮ ಸೇವೆ ಕೂಡಾ ನಡೆಯಿತು. `ಶ್ರೀ ಶಾಸ್ತಾವು ಯಕ್ಷಗಾನ ಕಲಾ ಸಂಘ ಪೆರಾಜೆ ‘ ಮತ್ತು ಅಯ್ಯಪ್ಪ ದೀಪೋತ್ಸವ ಸಮಿತಿ ಇದರ ಸದಸ್ಯರಿಂದ ಶ್ರೀ ಶಾಸ್ತಾವು ದೇವಸ್ಥಾನ ದ ಅವರಣದಲ್ಲಿ ಯಕ್ಷಗಾನ ತಾಳಮದ್ದಳೆ ಮೇದಿನಿ ನಿರ್ಮಾಣ ನಡೆಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಜಿತೇಂದ್ರ ಎನ್.ಎ. ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.