ಪಂಬೆತ್ತಾಡಿ ಸಹಕಾರಿ ಸಂಘದ ಮಹಾಸಭೆ

0

 

 

84.14 ಕೋಟಿ ರೂ. ವ್ಯವಹಾರ, 15.89 ಲಕ್ಷ ಲಾಭ

ಪಂಬೆತ್ತಾಡಿ ಪ್ರಾ.ಕೃ.ಪ.ಸ. ಸಂಘದ ವಾರ್ಷಿಕ ಮಹಾಸಭೆ ಸೆ. 24ರಂದು ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡರ ಅಧ್ಯಕ್ಷತೆಯಲ್ಲಿ ಸಂಘದ ವಠಾರದಲ್ಲಿ ನಡೆಯಿತು. ಸಂಘದ ಅಧ್ಯಕ್ಷ ಜಾಕೆ ಮಾಧವ ಗೌಡ ಸ್ವಾಗತಿಸಿ ವರದಿ ಸಾಲಿನಲ್ಲಿ ಶೇ 100 ಸಾಲ ವಸೂಲಾತಿಗೆ ಸಹಕಾರ ನೀಡಿದ ಸಾಲಗಾರ ಸದಸ್ಯರಿಗೆ ಕೃತಜ್ಞತೆ ಸಲ್ಲಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ. ಪುರುಷೋತ್ತಮ ಶೆಟ್ಟಿ ವಾರ್ಷಿಕ ವರದಿ ವಾಚಿಸಿದರು. ವರದಿ ವರ್ಷದ ಅಂತ್ಯಕ್ಕೆ ಸಂಘವು ರೂ. 9.75 ಕೋ ಠೇವಣಿ ಹೊಂದಿದ್ದು ರೂ. 12.58 ಕೋ ಸಾಲದ ಹೊರಬಾಕಿಯನ್ನು ಹೊಂದಿ ಒಟ್ಟು
ರೂ. 84.14 ಕೋ ವ್ಯವಹಾರ ನಡೆಸಿ ರೂ. 15.89 ಲಕ್ಷ ಲಾಭಗಳಿಸಿದೆ. ಸದಸ್ಯರಿಗೆ ಶೇ‌ 6 ಡಿವಿಡೆಂಟ್ ನೀಡುವುದಾಗಿ ಹೇಳಿದರು. ಸಂಘದ ನಿರ್ದೇಶಕರಾದ ಕೆ.ಎಸ್. ಮಹೇಶ್ ಕುಮಾರ್, ಬಿ. ಜಯರಾಮ, ಗಣೇಶ್ ಪ್ರಸಾದ್ ಬಿ.ಎಲ್, ಧರ್ಮಣ್ಣ ನಾಯ್ಕ, ರೋಹಿತಾಶ್ವ, ವೆಂಕಪ್ಪ ಎನ್.ಪಿ, ಶ್ರೀಮತಿ ಬಿ. ಮುಕಾಂಬಿಕಾ, ಶ್ರೀಮತಿ ಕೆ. ಭಾಗೀರಥಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಘದ ಉಪಾಧ್ಯಕ್ಷ ಕುಲ್ ದೀಪ್ ಎಸ್. ಸುತ್ತುಕೋಟೆ ವಂದಿಸಿದರು.
ಸಂಘದ ಸಿಬ್ಬಂದಿಗಳು ಸಹಕಾರ ನೀಡಿದರು. ಸಂಘದ ಸದಸ್ಯರು ಕಲಾಪದಲ್ಲಿ ಪಾಲ್ಗೊಂಡು ಸಲಹೆಗಳನ್ನು ನೀಡಿದರು. ವರದಿ ಸಾಲಿನಲ್ಲಿ ನಿಧನರಾದ ಸಂಘದ ಸದಸ್ಯರಿಗೆ ಮೌನ ಪ್ರಾರ್ಥನೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.