ಸುಬ್ರಹ್ಮಣ್ಯ ಗ್ರಾ.ಪಂ ನ ಗ್ರಾಮ ಸಭೆ

0

ಘನ ತಾಜ್ಯ, ಗೋವಿನ ಸಮಸ್ಯೆ, ಗೋ ಶಾಲೆ, ಪ್ರಾಥಮಿಕ ಶಾಲೆ, ರಸ್ತೆ ಬಗ್ಗೆ ಚರ್ಚೆ

ಸುಬ್ರಹ್ಮಣ್ಯ ಗ್ರಾ.ಪಂ ನ ಗ್ರಾಮ ಸಭೆ ಇಂದು ನಡೆದಿದ್ದು ಘನ ಘನ ತಾಜ್ಯ, ಗೋವಿನ ಸಮಸ್ಯೆ, ಗೋ ಶಾಲೆ, ಪ್ರಾಥಮಿಕ ಶಾಲೆ, ರಸ್ತೆ ಬಗ್ಗೆ ಚರ್ಚೆ ನಡೆಯಿತು.

 

ಸಭೆಯ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಲಲಿತಾ ಗುಂಡಡ್ಕ ವಹಿಸಿದ್ದರು. ವೇದಿಕೆಯಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸವಿತಾ ಭಟ್, ಸದಸ್ಯರುಗಳಾದ ರಾಜೇಶ್‌ ಕೆ, ಮಲ್ಲಿಕಾ, ವೆಂಕಟೇಶ್ ಎಚ್ ಎಲ್, ಭಾರತಿ ದಿನೇಶ್, ನಾರಾಯಣ ಅಗ್ರಹಾರ, ದಿವ್ಯ, ಹರೀಶ್ ಇಂಜಾಡಿ, ಸೌಮ್ಯ, ಜಯಂತಿ, ಮೋಹನ ಕೋಟಿಗೌಡನ ಮನೆ, ಶಶಿಕಲಾ, ದಿಲೀಪ್ ಉಪ್ಪಳಿಕೆ, ಸುಜಾತ, ಭವ್ಯಕುಮಾರಿ ಕೆ.ಎಲ್, ಶಿವರಾಮ ನೆಕ್ರಾಜೆ, ಪುಷ್ಪಲತಾ, ಗಿರೀಶ್ ಆಚಾರ್ಯ, ಭಾರತಿ ಶಶಿಕಾಂತ್ ಉಪಸ್ಥಿತರಿದ್ದರು. ಪಿಡಿಒ ಯು ಡಿ ಶೇಖರ್ ಸ್ವಾಗತಿಸಿದರು. ಕಾರ್ಯದರ್ಶಿ ಮೋನಪ್ಪ ವರದಿ ವಾಚಿಸಿದರು.
ಮೆಸ್ಕಾಂ ಚಿದಾನಂದ, ಆರೋಗ್ಯ ಇಲಾಖೆಯ ಹಿರಿಯ ಆರೋಗ್ಯ ಸಹಾಯಕ ಉಮ್ಮರ್ ಖಾನ್, ಪಶು ಇಲಾಖೆಯ ಡಾl ಮಲ್ಲಿಕಾ, ಶಿಕ್ಷಣ ಇಲಾಖೆ ಸುಬ್ರಹ್ಮಣ್ಯ, ತೋಟಗಾರಿಕಾ ಇಲಾಖೆಯ ಮಧುಶ್ರೀ, ರೈತ ಸಂಪರ್ಕ ಇಲಾಖೆಯ ಸುಹಾಸ್, ಅರಣ್ಯ ಇಲಾಖೆಯ ಪ್ರಕಾಶ್ ಅಗಸಿಮುನಿ ಇಲಾಖಾ ಮಾಹಿತಿ ನೀಡಿದರು.