ಬಡ ಕುಟುಂಬದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸಹಕರಿಸಿದ ನಗರ ಪಂಚಾಯತ್ ಸದಸ್ಯಕೆ ಎಸ್ ಉಮ್ಮರ್

0

ಬಡ ಕುಟುಂಬದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ನಗರ ಪಂಚಾಯತ್ ಸದಸ್ಯಕೆ ಎಸ್ ಉಮ್ಮರ್ ರವರು ಸಹಕರಿಸಿದರು.

ಸುಳ್ಯ ಬೋರುಗುಡ್ಡೆಯಲ್ಲಿ ಬಾಡಿಗೆ ರೂಮಿನಲ್ಲಿ
ವಾಸವಾಗಿದ್ದ ಧಾರವಾಡ ಮೂಲದ ಬಸಪ್ಪ
ಎಂಬವರು ಅನಾರೋಗ್ಯದಿಂದ ಅಕ್ಟೋಬರ್ 1 ರಂದು ಬೋರುಗುಡ್ಡೆ ಮನೆಯಲ್ಲಿ ನಿಧನ ಹೊಂದಿದ್ದರು.
ಮೃತರು ಪತ್ನಿ ಮಾತ್ರ ಜೊತೆಯಲ್ಲಿದ್ದು ಕೂಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರಿಂದ ಆರ್ಥಿಕವಾಗಿ ಸಂಕಷ್ಟ ಎದುರಿಸುತ್ತಿದ್ದರು.
ಅವರ ಸ್ವಂತ ಊರಿಗೆ ಮೃತ ಶರೀರವನ್ನು ಕೊಂಡೊಯ್ಯಲು ಮನೆಯವರಲ್ಲಿ ಹಣ ಇಲ್ಲದೆ ಇರುವ ವಿಷಯ ಸುಳ್ಯ ನಗರ ಪಂಚಾಯತ್‌ ಸದಸ್ಯ ಕೆಎಸ್‌ಉಮ್ಮರ್‌ ಅವರ ಗಮನಕ್ಕೆ ಬಂದು
ಸುಳ್ಯದ ಕೇರ್ಪಳದ ಹಿಂದೂ ರುದ್ರ ಭೂಮಿಯಲ್ಲಿ ಅವರ ಅಂತ್ಯ ಸಂಸ್ಕಾರ ನೆರವೇರಿಸುವ ಸಂಪೂರ್ಣವ್ಯವಸ್ಥೆ
ಮಾಡಿ ಸಹಕರಿಸಿದ್ದಾರೆ. ಇವರೊಂದಿಗೆ ಸುಳ್ಯ ಪ್ರಗತಿ ಆಂಬುಲೆನ್ಸ್ ಮಾಲಕ ಅಚ್ಚು ಮತ್ತು ಸ್ಥಳೀಯರಾದ ಎಂ ಟಿ ಅಬೂಬಕ್ಕರ್‌, ನ ಪಂ ಸಿಬ್ಬಂದಿ ಬಿಜಿಲ ಹಾಗೂ ಮೃತನ
ಗೆಳೆಯರು ಸಹಕರಿಸಿದರು.