ಉಬರಡ್ಕ: ಮರಣ ಸಾಂತ್ವನ ಧನ ಸಹಾಯ ವಿತರಣೆ

0

 

 

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ನಿಧನರಾದ ಶ್ರೀಮತಿ ಸರಸ್ವತಿ ಕಕ್ಕೆಬೆಟ್ಟು ಇವರಿಗೆ, ಮರಣ ಸಾಂತ್ವನ ನಿಧಿ ರೂ 8000 ವನ್ನು ಮೃತರ ಪುತ್ರ ಸಂಘದ ನಿರ್ದೇಶಕ ಜಗದೀಶ ಕಕ್ಕೆಬೆಟ್ಟು ಇವರಿಗೆ, ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ದಾಮೋದರ ಗೌಡ ಮದುವೆಗದ್ದೆ ವಿತರಿಸಿ, ಸಾಂತ್ವನ ಹೇಳಿದರು. ಈ ಮೊತ್ತವನ್ನು ಜಗದೀಶ್ ಕಕ್ಕೆಬೆಟ್ಟು ರವರು ಸಂಘಕ್ಕೆ ದೇಣಿಗೆಯಾಗಿ ಹಿಂತಿರುಗಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪಿ.ಎಸ್. ಗಂಗಾಧರ್, ಹರಿಪ್ರಸಾದ್ ಪಾನತ್ತಿಲ, ಸುರೇಶ್ ಎಂ.ಎಚ್, ವಿಜಯಕುಮಾರ್ ಉಬರಡ್ಕ, ಹರೀಶ್ ಮಾಣಿಬೆಟ್ಟು, ಶ್ರೀಮತಿ ಲೀಲಾವತಿ ಬಳ್ಳಡ್ಕ, ಶ್ರೀಮತಿ ಶಾರದಾ ಡಿ.ಶೆಟ್ಟಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಶಿವಪ್ರಸಾದ್ ಪಡ್ಪು, ಗುಮಾಸ್ತೆ ಶ್ರೀಮತಿ ರಮ್ಯ, ಅಟೆಂಡರ್ ಗುರುವ, ಮೊದಲಾದವರು ಉಪಸ್ಥಿತರಿದ್ದರು.