ಗಾಂಧಿನಗರ :ಜ್ಯೋತಿಷ್ಯ ಸಂಸ್ಥೆಯ ನೂತನ ಶಾಖೆ ಶುಭಾರಂಭ

0

 

ಗಾಂಧಿನಗರ, ಜ್ಯೋತಿಷಿ ಲಕ್ಷ್ಮಿ ನಾರಾಯಣರವರ ನೇತೃತ್ವದ ಜ್ಯೋತಿಷ್ಯರು ಸಂಸ್ಥೆಯ ನೂತನ ಶಾಖೆ ಗಾಂಧಿನಗರ ಆಲಟ್ಟಿ ಕ್ರಾಸ್ ಬಳಿ ಪಿ.ಕೆ. ಬಿಲ್ಡಿಂಗ್ ಇದರ ಪ್ರಥಮ ಮಳಿಗೆಯಲ್ಲಿ ಇಂದು ಶುಭಾರಂಭಗೊಂಡಿತು.

 


ಪುರೋಹಿತ ನಾಗೇಂದ್ರ ಭಟ್ ರವರ ನೇತೃತ್ವದಲ್ಲಿ ಗಣ ಹೋಮ ನಡೆಸಿ ಸಂಸ್ಥೆಯನ್ನು ಉದ್ಘಾಟಿಸಿದರು.
ನೂತನ ಶಾಖೆಯನ್ನು ಉದ್ಘಾಟಿಸಿ ಮಾತನಾಡಿರುವ ಜ್ಯೋತಿಷಿ ಲಕ್ಷ್ಮೀನಾರಾಯಣ ಕಳೆದ 40 ವರ್ಷಗಳಿಂದ ಸುಳ್ಯ ಪರಿಸರದಲ್ಲಿ ಸಂಸ್ಥೆಯನ್ನು ನಡೆಸಿಕೊಂಡು ಬರುತ್ತಿದ್ದು ಸುಳ್ಳದ ಜನರ ಸಹಕಾರ ಮತ್ತು ಪ್ರೋತ್ಸಾಹ ಸಂಸ್ಥೆ ಬೆಳೆಯಲು ಕಾರಣವಾಗಿದೆ. ಸಂಸ್ಕೃತ ವಿಶ್ವವಿದ್ಯಾಲಯಗಳಿಂದ ಜ್ಯೋತಿಷ್ಯ ಸರ್ಟಿಫಿಕೇಟ್ ಡಿಪ್ಲೋಮಾ ಹಾಗೂ ಅಡ್ವಾನ್ಸ್ ವಾಸ್ತು ಡಿಪ್ಲೋಮಾ ಪಡೆದಿರುವ ನಾನು ಜನಸೇವೆ ಮತ್ತು ಸಮಾಜದ ಅಭಿವೃದ್ಧಿಯ ಬಗ್ಗೆ ಗುರಿಯನ್ನು ಹೊಂದಿಕೊಂಡು ನಮ್ಮ ಸಂಸ್ಥೆ ಸುಳ್ಯದಲ್ಲಿ ಕಾರ್ಯಚರಿಸುತ್ತಿದೆ. ಮುಂದಿನ ದಿನಗಳಲ್ಲಿಯೂ ಕೂಡ ಸುಳ್ಯದ ಜನತೆಯ ಸಹಕಾರವನ್ನು ಬಯಸುತ್ತಿದ್ದೇನೆ ಎಂದು ಹೇಳಿದರು.
ಉದ್ಘಾಟನಾ ಸಂದರ್ಭದಲ್ಲಿ ಸ್ಥಳೀಯ ಉದ್ಯಮಿ ರಂಜಿತ್ ಪೂಜಾರಿ, ಎ ಎಸ್ ಐ ಗಂಗಾಧರ್, ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.