ಪೈಲಾರು ಮಿತ್ರ ವೃಂದ ವಾರ್ಷಿಕ ಮಹಾಸಭೆ- ನೂತನ ಪದಾಧಿಕಾರಿಗಳ ಆಯ್ಕೆ, ಅಧ್ಯಕ್ಷ -ಶಶಿಕಾಂತ್ ಮಿತ್ತೂರು, ಕಾರ್ಯದರ್ಶಿ-ಧನ್ಯರಾಜ್ ಮೂಕಮಲೆ, ಖಜಾಂಜಿ-ಹರ್ಷಿತ್ ಜಿ.ಜೆ

0


ಅಮರಮುಡ್ನೂರು ಗ್ರಾಮದ ಪೈಲಾರು
ಮಿತ್ರವೃಂದ ಇದರ ವಾರ್ಷಿಕ ಮಹಾಸಭೆಯು ಅ. 16 ರಂದು ಪೈಲಾರು ಮಿತ್ರವೃಂದ ಕಛೇರಿಯಲ್ಲಿ ನಡೆಯಿತು. ಮಿತ್ರವೃಂದದ ಅಧ್ಯಕ್ಷ ಹರ್ಷಿತ್ ಜಿ. ಜೆ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು.

ನೂತನ
ಅಧ್ಯಕ್ಷ ಶಶಿಕಾಂತ್ ಮಿತ್ತೂರು, ಉಪಾಧ್ಯಕ್ಷ ಸೃಜನ್ ಬಾಬ್ಲುಬೆಟ್ಟು, ಕೋಶಾಧಿಕಾರಿ ಹರ್ಷಿತ್ ಜಿ ಜೆ, ಕಾರ್ಯದರ್ಶಿ ಧನ್ಯರಾಜ್ ಮೂಕಮಲೆ, ಜತೆ ಕಾರ್ಯದರ್ಶಿ ಪ್ರಭಾಕರನ್ ಪೈಲಾರು, ನಿರ್ದೇಶಕರಾಗಿ ದೇವಿಪ್ರಸಾದ್ ಕೋಡ್ತುಗುಳಿ, ಕುಶಾಲಪ್ಪ ಗೌಡ ಮಾಡಬಾಗಿಲು, ಜಯಂತ್ ನಾಯರ್ ಕಲ್ಲು, ವಿವೇಕ್ ಪಡ್ಪು, ಪ್ರವೀಣ್ ಕುಲಾಲ್ ಪೈಲಾರು, ಹಿತೇಶ್ ಮೂಕಮಲೆ, ಯತೀಶ ಎಂ. ಜಿ ಯವರನ್ನು ಆಯ್ಕೆ ಮಾಡಲಾಯಿತು. ವಿವೇಕ್ ಪಡ್ಪು ಸ್ವಾಗತಿಸಿದರು. ಧನ್ಯರಾಜ್ ಮೂಕಮಲೆ ವರದಿ ವಾಚಿಸಿದರು. ಹರ್ಷಿತ್ ಜಿ. ಜೆ ವಂದಿಸಿದರು. ಶಶಿಕಾಂತ್ ಮಿತ್ತೂರು ಕಾರ್ಯಕ್ರಮ ನಿರೂಪಿಸಿದರು.