ಸುಳ್ಯ ಶಿಶುಪಾಲನಾ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

0

ಸುಳ್ಯದ ಗುರುಂಪುನಲ್ಲಿ ಕಾರ್ಮಿಕ ಕಟ್ಟಡ ಮತ್ತು ನಿರ್ಮಾಣ ಮಂಡಳಿಯ ಶಿಶು ಪಾಲನಾ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ನ.14 ರಂದು ಆಚರಿಸಲಾಯಿತು.

ದ. ಕ.ಜಿಲ್ಲಾ ವಿಕಲ ಚೇತನರ ಕಾರ್ಯಕರ್ತರ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರವೀಣ್ ನಾಯಕ್ ಅವರು ಕಾರ್ಯಕ್ರಮದ ಮುಖ್ಯ ಅತಿಥಿ ಯಾಗಿ ಆಗಮಿಸಿ ಚಾಚಾ ನೆಹರೂ ಅವರ ಬಗ್ಗೆ ಮಾತಾಡಿ ಇತ್ತೀಚಿಗೆ ಸ್ಪರ್ಧೆಗಳಲ್ಲಿ ವಿಜೇತರಾದ ಪುಟಾಣಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.

ಶಿಶು ಪಾಲನಾ ಕೇಂದ್ರ ದ ಕಾರ್ಡಿನೆಟರ್ ಕೀರ್ತಿಕಾ, ರಂಜಿತ್, ಶಿಕ್ಷಕಿ ಝುಲ್ಫತ್, ಸಹಾಯಕಿ ಸುಮಿತ, ಲೋಕೇಶ್,ಪುಟಾಣಿ ವಿದ್ಯಾರ್ಥಿಗಳು ಹಾಜರಿದ್ದರು.

ಪುಟಾಣಿ ವಿದ್ಯಾರ್ಥಿಗಳು ಮಕ್ಕಳ ದಿನಾಚರಣೆಯ ನಿಮಿತ್ತ ಕೆಲ ಹಾಡುಗಳಿಗೆ ಕುಣಿಯುತ್ತ ನೃತ್ಯ ಮಾಡಿದರು.

ಕೀರ್ತಿಕಾ ಸ್ವಾಗತಿಸಿ, ಝುಲ್ಪತ್ ವಂದಿಸಿದರು. ಪುಟಾಣಿಗಳಿಗೆ ಸಿಹಿ ತಿಂಡಿ ವಿತರಿಸಲಾಯಿತು.