ಪಂಜ ಪ್ರಾ.ಕೃ.ಪ. ಸ. ಸಂಘದ ಅಧ್ಯಕ್ಷರಾಗಿಗಣೇಶ್ ಪೈ-ಉಪಾಧ್ಯಕ್ಷರಾಗಿ ರಘುನಾಥ ರೈ ಕೆರೆಕ್ಕೋಡಿ ಅವಿರೋಧ ಆಯ್ಕೆ

0

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಗಣೇಶ್ ಪೈ ಮತ್ತು ಉಪಾಧ್ಯಕ್ಷರಾಗಿ ರಘುನಾಥ ರೈ ಕೆರೆಕ್ಕೋಡಿ ಯವರು ನ.16 ರಂದು ಅವಿರೋಧ ಆಯ್ಕೆಯಾಗಿದ್ದಾರೆ. ಚುನಾವಣಾ ಅಧಿಕಾರಿಯಾಗಿ, ಸಹಕಾರ ಅಭಿವೃದ್ಧಿ ಅಧಿಕಾರಿ ಶಿವಲಿಂಗಯ್ಯ ರವರು ಕರ್ತವ್ಯ ನಿರ್ವಹಿಸಿದರು. ಈ ಹಿಂದೆ ಸುಬ್ರಹ್ಮಣ್ಯ ಕುಳ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಲಿಗೋಧರ ಆಚಾರ್ಯ ರವರು ಪಕ್ಷದ ಎರಡುವರೇ ವರ್ಷಗಳ ಅವಧಿಗೆ ತೀರ್ಮಾನದಂತೆ ಸೇವೆಗೈದಿದ್ದರು. ಬೀದಿಗುಡ್ಡೆ ನೂತನ ಗೋದಾಮು ಕಟ್ಟಡ ಉದ್ಘಾಟನೆ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಅವರು ರಾಜೀನಾಮೆ ಸಲ್ಲಿಸಿದ್ದರು.

ತೆರವು ಗೊಂಡ ಸ್ಥಾನಗಳಿಗೆ ನ.16 ರಂದು ಚುನಾವಣೆ ಪ್ರಕ್ರಿಯೆ ನಡೆಸಿದಾಗ ಅಧ್ಯಕ್ಷ ಸ್ಥಾನಕ್ಕೆ 1ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ 1 ನಾಮಪತ್ರ ಸಲ್ಲಿಕೆಯಾಗಿ ಅವರು ಅವಿರೋಧ ಆಯ್ಕೆಯಾಗಿದ್ದಾರೆ.

ಸಂಘದ ನಿರ್ದೇಶಕರಾದ ‌ ಚಂದ್ರಶೇಖರ ಶಾಸ್ತ್ರಿ,ಸುಬ್ರಹ್ಮಣ್ಯ ಕುಳ,ಲಿಗೋಧರ ಆಚಾರ್ಯ, ಶ್ರೀಕೃಷ್ಣ ಭಟ್ ಪಟೋಳಿ, ಚಿನ್ನಪ್ಪ ಚೊಟ್ಟೆಮಜಲು,ವಾಚಣ್ಣ ಕೆರೆಮೂಲೆ,ಕಿಟ್ಟಣ್ಣ ಪೂಜಾರಿ ಕಾಂಜಿ,ಮುದರ ಐವತ್ತೊಕ್ಲು, ಶ್ರೀಮತಿ ಹೇಮಲತಾ ಚಿದ್ಗಲ್, ಮೋಹಿನಿ ಬೊಳ್ಮಲೆ ಪಾಲ್ಗೊಂಡಿದ್ದು , ನೂತನ ಅಧ್ಯಕ್ಷ ,ಉಪಾಧ್ಯಕ್ಷರನ್ನು ಸ್ವಾಗತಿಸಿದರು. ಮೇಲ್ವಿಚಾರಕ ಪ್ರದೀಪ್ ಕುಮಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಉಪಸ್ಥಿತರಿದ್ದರು.