ಉಬರಡ್ಕ:
ಮರಣ ಸಾಂತ್ವನ ಧನ ಸಹಾಯ ವಿತರಣೆ

0

ಉಬರಡ್ಕ ಮಿತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರಾಗಿದ್ದು ನಿಧನರಾದ ಗುಡ್ಡಪ್ಪ ಗೌಡ ಅಮೈ ಇವರಿಗೆ, ಮರಣ ಸಾಂತ್ವನ ನಿಧಿ ರೂ 8000 ವನ್ನು ಮೃತರ ಪುತ್ರ ಸೀತಾರಾಮ ಇವರಿಗೆ, ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ದಾಮೋದರ ಗೌಡ ಮದುವೆಗದ್ದೆ ವಿತರಿಸಿ, ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರಾದ ಪಿ.ಎಸ್. ಗಂಗಾಧರ್, ಹರಿಪ್ರಸಾದ್ ಪಾನತ್ತಿಲ, ಸುರೇಶ್ ಎಂ.ಎಚ್, ಹರೀಶ್ ಮಾಣಿಬೆಟ್ಟು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ಉರುಂಡೆ, ನ್ಯಾಯವಾದಿ ರಾಮಕೃಷ್ಣ ಅಮೈ, ಕೃಷಿಕ ಬಾಲಚಂದ್ರ ಅಮೈ, ಭರತ ಮಾಣಿಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.