ಕಲ್ಲಪಳ್ಳಿ ಗಡಿಪ್ರದೇಶದಲ್ಲಿ ರಸ್ತೆ ಕಾಂಕ್ರೀಟ್ ಕಾಮಗಾರಿ- ಒಂದು ತಿಂಗಳು ವಾಹನ ಸಂಚಾರ ನಿಷೇಧ

0

ಸುಳ್ಯದಿಂದ ಅಂತರಾಜ್ಯ ಪಾಣತ್ತೂರು ಕಡೆಗೆ ಸಂಚರಿಸುವ ರಸ್ತೆ ಮಧ್ಯೆ ಕಲ್ಲಪಳ್ಳಿ ಗಡಿಪ್ರದೇಶದಲ್ಲಿ ಕರ್ನಾಟಕ ಭಾಗಕ್ಕೆ ಸೇರಿದ 100 ಮೀಟರ್ ನಷ್ಟು ರಸ್ತೆಗೆ ಕಾಂಕ್ರೀಟ್ ಕಾಮಗಾರಿ ಕೆಲಸ ನಡೆಯುತ್ತಿದ್ದು ವಾಹನ ಸಂಚಾರವನ್ನು ಒಂದು ತಿಂಗಳ ಕಾಲ ನಿಷೇಧಿಸಲಾಗಿದೆ.
ನ. 21 ರಿಂದ ಡಿ. 20 ರ ತನಕ ಯಾವುದೇ ವಾಹನಗಳು ಈ ರಸ್ತೆಯ ಮೂಲಕ ಸಂಚರಿಸಲು ಅವಕಾಶವಿರುವುದಿಲ್ಲ ಎಂದು ಸುಳ್ಯ ಜಿ.ಪಂ.ಇಂಜಿನಿಯರ್ ಉಪವಿಭಾಗದ ಇಂಜಿನಿಯರ್ ತಿಳಿಸಿದ್ದಾರೆ. ಸಾರ್ವಜನಿಕರಿಗೆ ಮಾಹಿತಿಗಾಗಿ ಈಗಾಗಲೇ ಅಲ್ಲಲ್ಲಿ ಬ್ಯಾನರ್ ಅಳವಡಿಸಲಾಗಿದೆ. ರಸ್ತೆಯು 3.8 ಮೀಟರ್ ಅಗಲದಲ್ಲಿ ಕಾಂಕ್ರೀಟ್ ಕೆಲಸ ಮಾಡಲಾಗುತ್ತಿದೆ.

ಎರಡೂ ಬದಿ ಬಸ್ ಸಂಚಾರದ ವ್ಯವಸ್ಥೆ:

ಸುಳ್ಯದಿಂದ ಬಡ್ಡಡ್ಕ ಸಮೀಪ ಬಾಟೋಳಿ ತನಕ ಖಾಸಗಿ ಬಸ್ ವ್ಯವಸ್ಥೆ ಹಾಗೂ ‌ಕೇರಳದ ಪಾಣತ್ತೂರಿನಿಂದ ಗಡಿಯ ಭಾಗದ ತನಕ ಕರಿಕೆ ಬಸ್ ಸಂಚಾರದ ವ್ಯವಸ್ಥೆ ಇರಲಿದೆ.