ಸುಳ್ಯ ಗುರು ರಾಘವೇಂದ್ರ ಮಠದಲ್ಲಿ ಪಲ್ಲಕ್ಕಿ ಸೇವೆ ಮತ್ತು ರಂಗ ಪೂಜೆ

0

ಸುಳ್ಯ ಶ್ರೀ ಗುರು ರಾಘವೇಂದ್ರ ಮಠದಲ್ಲಿ ವಿಶೇಷವಾಗಿ ರಂಗಪೂಜೆ ಮತ್ತು ಪಲ್ಲಕ್ಕಿ ಉತ್ಸವ ನ.24 ರಂದು ನಡೆಯಿತು.


ಸುಳ್ಯ ಬೃಂದಾವನ ಸೇವಾ ಟ್ರಸ್ಟಿನ ಅಧ್ಯಕ್ಷ ಆರ್ಯಭಟ ಪ್ರಶಸ್ತಿ ಪುರಸ್ಕೃತ ಶ್ರೀಕೃಷ್ಣ ಸೋಮಯಾಗಿ ಯವರ‌ ಪುತ್ರಿ ಶ್ರೀಮತಿ ಸ್ವಾತಿ ಮತ್ತು ಶರಣ್ ಕುಮಾರ್‌ ಭಟ್ ದಂಪತಿಯ ಪ್ರಥಮ ವರ್ಷದ ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಸೇವಾ ರೂಪದಲ್ಲಿ ಪೂಜೆಯು ನೆರವೇರಿತು. ಪ್ರಧಾನ ಅರ್ಚಕ ಶ್ರೀಹರಿ ಎಳಚಿತ್ತಾಯ ರವರ ನೇತೃತ್ವದಲ್ಲಿ ಪೂಜಾ ಕೈಂಕರ್ಯ ನೆರವೇರಿತು.

ಸಂಜೆ ಶ್ರೀ ಸದಾಶಿವ ಭಜನಾ ಸಂಘದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆದು ಬಳಿಕ ವಿಶೇಷವಾಗಿ ಶ್ರೀ ಗುರು ರಾಯರಿಗೆ ರಂಗ ಪೂಜೆಯಾಗಿ ಚೆಂಡೆ ವಾದನ,ಸ್ಯಾಕ್ಸೋಫೋನ್ ವಾದನ,ಕೊಳಲು ವಾದನ, ವೇದ ಪಾರಾಯಣ ಹಾಗೂ ಭಜನೆಯೊಂದಿಗೆ ಪಲ್ಲಕ್ಕಿ ಸೇವೆಯು ಜರುಗಿತು. ರಾತ್ರಿ ಮಹಾ ಪೂಜೆಯಾಗಿ ಪ್ರಸಾದ ವಿತರಣೆಯಾಯಿತು. ಈ ಸಂದರ್ಭದಲ್ಲಿ ಶ್ರೀಕೃಷ್ಣ ಸೋಮಯಾಗಿ ಯವರ ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಭಾಗವಹಿಸಿದರು. ಆಗಮಿಸಿದ ಎಲ್ಲರಿಗೂ ರಾತ್ರಿ ಅನ್ನ ಸಂತರ್ಪಣೆಯಾಯಿತು.